HEALTH TIPS

ಸೇವಾಭಾರತಿಗೆ ನೂತನ ಆಂಬುಲೆನ್ಸ್-ಕೀಲಿಕೈ ಹಸ್ತಾಂತರ ಸಮಾರಂಭ

ಕಾಸರಗೋಡು: ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ಜರಗಿತು.  ಕಾಸರಗೋಡು ಜನಾರ್ದನ ಆಸ್ಪತ್ರೆಯ (ಡ್ರೀಂ ಫ್ಲವರ್ ಐವಿಎಫ್ ಸೆಂಟರ್) ಡಾ. ಜಯಲಕ್ಷ್ಮಿ ಸೂರಜ್ ಅವರ ತಂದೆ ಡಾ. ವಿ.ಎಂ ವಿಜಯನ್ ಅವರ ಸ್ಮರಣಾರ್ಥವಾಗಿ ಆಂಬುಲೆನ್ಸ್ ವಾಹನ ವಿತರಿಸಲಾಗಿದೆ. ಡಾ. ಜಯಲಕ್ಷ್ಮೀಸೂರಜ್ ಅವರ ಮಾತೃಶ್ರೀ ಮಣಿಬೆನ್ ವಿಜಯನ್ ಅವರು ನೂತನ ಆಂಬುಲೆನ್ಸ್ ವಾಹನದ ಕೀಲಿಕೈ ಸೇವಾಭಾರತಿ ಕಾಸರಗೋಡು ಜಿಲ್ಲಾಧ್ಯಕ್ಷ ದಿನೇಶ್ ಎಂ.ಟಿ ಅವರಿಗೆ ಹಸ್ತಾಂತರಿಸಿದರು.  

ಡಾಕ್ಟರ್ ಸೂರಜ್ ಮತ್ತು ಡಾ.ಜಯಲಕ್ಷ್ಮಿ ಸೂರಜ್ ಉಪಸ್ಥಿತರಿದ್ದರು.  ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ವಾರ್ಡ್ ಸದಸ್ಯರಾದ ರಾಮಕೃಷ್ಣ ಹೊಳ್ಳ, ದಿವ್ಯ, ಎನ್.ಸತೀಶ್, ರವಿ ಕೇಸರಿ, ಬಾಲಕೃಷ್ಣ, ಅಜೀಶ್, ಉಮೇಶ, ದಯಾನಂದ ಭಟ್, ಸಂತೋಷ್, ವಿನಿಲ್, ಸೌಮ್ಯ, ಆಸ್ಪತ್ರೆ ಪಿ.ಆರ್.ಒ ಶ್ರೀಚಂದ್, ಸೇವಾಭಾರತಿ ಕಾಸರಗೋಡು ನಗರ ಸಮಿತಿ ಅಧ್ಯಕ್ಷ ಸುಜಿತ್ ಕುಮಾರ್, ಸೇವಾಭಾರತಿ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ಶ್ರೀಜ, ಶ್ರೀಕಾಂತ್ ಉಪಸ್ಥಿತರಿದ್ದರು.  

ಸೇವಾಭಾರತಿ ನಗರ ಪ್ರಧಾನ ಕಾರ್ಯದರ್ಶಿ ಸಂದೇಶ್ ಕೇಳುಗುಡ್ಡೆ ಸ್ವಾಗತಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಖಂಡ್ ಸೇವಾ ಪ್ರಮುಖ್ ಜಯಕುಮಾರ್ ವಂದಿಸಿದರು.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries