ಕಾಸರಗೋಡು: ಕ್ವಾರ್ಟರ್ಸ್ನಲ್ಲಿ ಜತೆಯಾಗಿ ವಾಸಿಸುತ್ತಿದ್ದ ಗೆಳೆಯ ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡು ನಗರಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕರ್ನಾಟಕದ ಗದಗ ಲಕ್ಷ್ಮೇಶ್ವರ ಅಂಬೇಡ್ಕರ್ ನಗರ ನಿವಾಸಿ ಗಿರಿಜಾ (28)ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಗೆಳೆಯನಾದ ಯೆಲ್ಲಪ್ಪ ಎಸ್ ಮೋಗೇರಿ (37) ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಚೌಕಿ ಕನ್ನಿಲ್ ಕೆ.ಎಂ. ಕ್ವಾರ್ಟರ್ಸ್ನಲ್ಲಿ ಈ ಇಬ್ಬರು ವಾಸಿಸುತ್ತಿದ್ದರು. ಈ ತಿಂಗಳ 18ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ತೆರಳಿದ ಎಲ್ಲಪ್ಪ ಎಸ್ ಮೋಗೇರಿ ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ತನಿಖೆ ನಡೆಸುತ್ತಿದ್ದಾರೆ.

