ಪೆರ್ಲ: ಪಡ್ರೆ ಗ್ರಾಮದ ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಏ.7ರಿಂದ 9ರವರೆಗೆ ನಡೆಯಲಿರುವ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮ)ದ ಅಂಗವಾಗಿ ಸೋಮವಾರ ಸಂಜೆ ಇಳಂತೋಡಿ ಅಂಗನವಾಡಿ ಹಾಗೂ ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದಿಂದ ವಾಹನದಲ್ಲಿ ಹೊರೆಕಾಣಿಕೆ ಮೆರವಣಿಗೆ ಹೊರಟು ಕುತ್ತಾಜೆ ಸೇತುವೆ ಬಳಿ ಒಂದಾಗಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಿಸಲಾಯಿತು.
ಏ.7ರಂದು ಸಂಜೆ 6.15ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಪೂಜೆ 6.30ಕ್ಕೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7ಕ್ಕೆ ಶ್ರೀ ರಕ್ತೇಶ್ವರಿ ದೈವದ ತೋಡಂಙಲ್, 8ಕ್ಕೆ ಶ್ರೀ ಪಡ್ಡೆಯಿ ಧೂಮಾವತಿ ದೈವದ ತೊಡಂಙಲ್, 8.30ಕ್ಕೆ ಮೋಂದಿ ಕೋಲ, 9.30ರಿಂದ ಅನ್ನಸಂತರ್ಪಣೆ, 11.30ರಿಂದ ಪೆÇಟ್ಟನ್ ದೈವ, ಸಪರಿವಾರ ರಕ್ತೇಶ್ವರಿ ದೈವದ ನೇಮೋತ್ಸವ ನಡೆಯುವುದು.



