ಪತ್ತನಂತಿಟ್ಟ: ವೃಷಭ ಮಾಸದ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನ ನಾಳೆ ತೆರೆಯಲಿದೆ. ಸಂಜೆ 5 ಗಂಟೆಗೆ, ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ಸಮ್ಮುಖದಲ್ಲಿ ಮೇಲ್ಶಾಂತಿ ಇ.ಡಿ. ಪ್ರಸಾದ್ ನಂಬೂದಿರಿ ದೇವಾಲಯ ಬಾಗಿಲು ತೆರೆದು ದೀಪ ಬೆಳಗಿಸಲಿದ್ದಾರೆ. ನಂತರ, 18 ನೇ ಮೆಟ್ಟಲಿನ ಕೆಳಗಿನ ಯಜ್ಣಕುಂಡದಲ್ಲಿ ಅಗ್ನಿ ಬೆಳಗಿಸುವರು. ಇದಕ್ಕಾಗಿ ಕಾಯುತ್ತಿರುವ ಅಯ್ಯಪ್ಪ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.
ವೃಷಭ ಮಾಸದ ಮೊದಲ ದಿನವಾದ 15 ನೇ ತಾರೀಖಿನ ಬೆಳಿಗ್ಗೆ 5 ಗಂಟೆಗೆ ದೇವಾಲಯವು ದರ್ಶನಕ್ಕಾಗಿ ತೆರೆಯಲಿದೆ. ಆ ದಿನದಿಂದ, ದೀಪಾರಾಧನೆಯ ನಂತರ 18 ನೇ ಮೆಟ್ಟಲಲ್ಲಿ ಪಡಿ ಪೂಜೆ ಇರುತ್ತದೆ. ಎಡವ ಮಾಸದ ಪೂಜೆಗಳನ್ನು ಪೂರ್ಣಗೊಳಿಸಿದ ನಂತರ, ಶಬರಿಮಲೆ ದೇವಸ್ಥಾನ 19 ನೇ ತಾರೀಖಿನ ರಾತ್ರಿ 10 ಗಂಟೆಗೆ ಮುಚ್ಚಲಿದೆ. ಶಬರಿಮಲೆಗೆ ಭೇಟಿ ನೀಡಲು ಬಯಸುವ ಭಕ್ತರು ವರ್ಚುವಲ್ ಕ್ಯೂ ವೆಬ್ಸೈಟ್ (www.sabarimalaonline.org) ಮೂಲಕ ಸ್ಥಳಗಳನ್ನು ಪಡೆದುಕೊಳ್ಳಬೇಕು.

