ಮುಂಬೈ: ಇಂಧನ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯನ್ನು ಬೆಂಬಲಿಸಿ ಮರಾಠ ನಾಯಕ ಮನೋಜ್ ಜಾರಂಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
"ಮೋದಿ ಸಾಹೇಬರ ಇಂಧನ ಉಳಿಸುವ ಮನವಿಯನ್ನು ಎಲ್ಲರೂ ಬೆಂಬಲಿಸಬೇಕು. ಇತ್ತೀಚಿನ ದಿನಗಳಲ್ಲಿ ನಾನು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ನಿಲ್ಲಿಸಿದ್ದೇನೆ" ಎಂದು ಮನೋಜ್ ಜಾರಂಗೆ ಹೇಳಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
"ನೀವು ತಲೆ ಬೋಳಿಸಿಕೊಳ್ಳಬಹುದು. ಅದರಿಂದ ಇನ್ನಷ್ಟು ಹಣ ಉಳಿಯುತ್ತದೆ" ಎಂದು ಮಹೇಶ್ ಶೆಟ್ಟಿ ಎಂಬವರು ಕಮೆಂಟ್ ಮಾಡಿದ್ದಾರೆ. "ನೀರನ್ನು ಉಳಿಸಲು ಅವರು ಸ್ನಾನ ಕೂಡ ಮಾಡುತ್ತಿಲ್ಲವೆಂದು ಅನಿಸುತ್ತದೆ" ಎಂದು ಶರತ್ ಚಂದ್ರ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ.
"ಮುಂದಿನ ಬಾರಿ ಅವರು ತಲೆಗೆ ಎಣ್ಣೆ ಹಚ್ಚಿದರೆ ಯಾರಾದರೂ ಬೆಂಕಿಕಡ್ಡಿ ಹಚ್ಚಬಹುದು" ಎಂದು ಸರಿತಾ ಫೆರ್ನಾಂಡಿಸ್ ಡಿ'ಸೋಜಾ ವ್ಯಂಗ್ಯವಾಡಿದ್ದಾರೆ. "ಅವರು ಸ್ನಾನವೇ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಶಿವಕುಮಾರ್ ಅರುಮುಗಂ ಪ್ರತಿಕ್ರಿಯಿಸಿದ್ದಾರೆ. "90 ಮಿಲಿ ಇಂಧನದ ಬಗ್ಗೆ ನಿಮ್ಮ ನಿಲುವು ಏನು?" ಎಂದು ಜೋಸೆಫ್ ಫೆರ್ನಾಂಡಿಸ್ ಎಂಬವರು ಪ್ರಶ್ನಿಸಿದ್ದಾರೆ. "ನೀರನ್ನು ಉಳಿಸಲು ಸ್ನಾನವನ್ನೇ ಮಾಡಬೇಡಿ" ಎಂದು ಜೋಸ್ ಕಲ್ಲೆಲಿ ಕೆ.ಜೆ. ಪ್ರತಿಕ್ರಿಯಿಸಿದ್ದಾರೆ.

