ಸಿಂಗಪುರ: ತಿಂಗಳುಗಳಿಂದ ಮಾಸಿಕ ವೇತನ ದೊರೆಯದೆ ಸಿಂಗಪುರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತೀಯ ಹೈಕಮಿಷನ್ ತಿಳಿಸಿದೆ.
ಎಸ್ಕೆ ಇಂಡಸ್ಟ್ರೀಸ್, ಕೆಪಿಎ ಎಂಜಿನಿಯರಿಂಗ್ ಮತ್ತು ವಿವಿಆರ್ ಪ್ಲಾಂಟ್ ಎಂಜಿನಿಯರಿಂಗ್ ಎಂಬ ಸಿಂಗಪುರದ ಮೂರು ಕಂಪನಿಗಳು ಭಾರತ ಮತ್ತು ಬಾಂಗ್ಲಾದೇಶದ 400ಕ್ಕೂ ಹೆಚ್ಚು ಕಾರ್ಮಿಕರಿಗೆ ವೇತನ ಮತ್ತು ವಸತಿ ನೀಡುತ್ತಿಲ್ಲ.
ಭಾರತದ ರಾಮು ಪಳನಿ ವೇಲು ಎಂಬವರು ಈ ಮೂರು ಕಂಪನಿಗಳಿಗೂ ನಿರ್ದೇಶಕರಾಗಿದ್ದಾರೆ ಎಂದು 'ದಿ ಸ್ಟ್ರೈಟ್ಸ್ ಟೈಮ್ಸ್' ದಿನಪತ್ರಿಕೆ ವರದಿ ಮಾಡಿದೆ.
ನ್ಯಾಷನಲ್ ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್ (ಎನ್ಟಿಯುಸಿ) ಮತ್ತು ಮಾನವಶಕ್ತಿ ಸಚಿವಾಲಯ (ಎಂಒಎಂ) ಕಾರ್ಮಿಕರಿಗೆ ನೆರವು ನೀಡುತ್ತಿದೆ.

