HEALTH TIPS

ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯೊಂದಿಗೆ ಮುಂದುವರಿಯಲು ಯುಡಿಎಫ್ ನಿರ್ಧಾರ: ಕಡಿಮೆ ಸಾಮಥ್ರ್ಯದ ಮದ್ಯದ ಮೇಲಿನ ತೆರಿಗೆ ಅಧ್ಯಯನ ಮಾಡಲು ಉಪಸಮಿತಿ ರಚನೆ

ತಿರುವನಂತಪುರಂ: ಕೇಂದ್ರ ಸರ್ಕಾರದ ಪಿಎಂಶ್ರೀ ಶಾಲಾ ಅಭಿವೃದ್ಧಿ ಯೋಜನೆಯೊಂದಿಗೆ ಮುಂದುವರಿಯಲು ಯುಡಿಎಫ್ ಸಭೆ ನಿರ್ಧರಿಸಿದೆ. ರಾಜ್ಯಕ್ಕೆ ಬರಬೇಕಾದ ಕೇಂದ್ರ ನಿಧಿಯನ್ನು ಪಡೆಯುವುದು ಸರ್ಕಾರದ ಬಾಧ್ಯತೆ ಮತ್ತು ಜವಾಬ್ದಾರಿ ಎಂದು ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 


ಹಿಂದಿನ ಎಲ್‍ಡಿಎಫ್ ಸರ್ಕಾರ ಈಗಾಗಲೇ ಸಹಿ ಮಾಡಿರುವ ಒಪ್ಪಂದದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಅವರು ಯುಡಿಎಫ್ ಸಭೆಯ ನಂತರ ಸ್ಪಷ್ಟಪಡಿಸಿದರು.

ಯೋಜನೆಯ ಭಾಗವಾಗಿ ಯಾವ ಸಾರ್ವಜನಿಕ ಶಾಲೆಗಳನ್ನು ಸೇರಿಸಬೇಕು ಮತ್ತು ಕಾರ್ಯಗತಗೊಳಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಕೇಂದ್ರ ನಿಧಿಯನ್ನು ಸರಿಯಾಗಿ ಬಳಸಿಕೊಂಡು ಶಾಲೆಗಳ ಭೌತಿಕ ಸ್ಥಿತಿಯನ್ನು ಸುಧಾರಿಸುವುದು ನಿರ್ಧಾರವಾಗಿದೆ.

ರಾಜ್ಯದಲ್ಲಿ ಕಡಿಮೆ ಸಾಮಥ್ರ್ಯದ ಮದ್ಯದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವನೆಯ ಕುರಿತು ಹೆಚ್ಚಿನ ಅಧ್ಯಯನಗಳನ್ನು ನಡೆಸಲು ಯುಡಿಎಫ್ ವಿಶೇಷ ಉಪಸಮಿತಿಯನ್ನು ನಿಯೋಜಿಸಿದೆ. ಪ್ರತಿಪಕ್ಷಗಳ ಸಮನ್ವಯ ಮತ್ತು ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಇನ್ನು ಮುಂದೆ ಪ್ರತಿ ತಿಂಗಳು ನಿಯಮಿತವಾಗಿ ಯುಡಿಎಫ್ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ.  






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries