HEALTH TIPS

ಕಾನತ್ತೂರು ಪ್ರದೇಶದಲ್ಲಿ ಚಿರತೆ ಓಡಾಟದ ವದಂತಿ-ಆತಂಕ

 

             ಕಾಸರಗೋಡು: ಮುಳಿಯಾರ್ ಪಂಚಾಯಿತಿಯ ಬೋವಿಕ್ಕಾನ ಸನಿಹದ ಕಾನತ್ತೂರು ಪಯೋಲ ಪ್ರದೇಶದಲ್ಲಿ ಚಿರತೆ ಕಂಡುಬಂದಿರುವ ಬಗ್ಗೆ ವದಂತಿ ಹರಡಿದ್ದು, ಈ ಪ್ರದೇಶದ ಜನರಲ್ಲಿ ಆತಂಕ್ಕೆ ಕಾರಣವಾಗಿದೆ. ಚಿರತೆಯನ್ನು ಹೋಲುವ ಪ್ರಾಣಿಯೊಂದು ರಸ್ತೆ ಅಡ್ಡದಾಟಿ ಸಂಚರಿಸಿರುವುದಾಗಿ ಈ ಹಾದಿಯಾಗಿ ವಾಹನದಲ್ಲಿ ಸಂಚರಿಸಿದವರು ತಿಳಿಸಿದ್ದಾರೆ. ಈಗಾಗಲೇ ಕಾನತ್ತೂರು ಆಸುಪಾಸು ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಕಾನತ್ತೂರು ಪ್ರದೇಶದ ಜನತೆಗೆ ಪ್ರಸಕ್ತ ಚಿರತೆ ಓಡಾಟದ ಬಗೆಗಿನ ವದಂತಿ ಮತ್ತಷ್ಟು   ಆತಂಕ್ಕೆ ಕಾರಣವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries