ಕುಂಬಳೆ: ರಾಷ್ಟ್ರೀಯ ಸೇವಾ ಭಾರತಿಯ ಪುತ್ತಿಗೆ ಪಂಚಾಯತಿ ಘಟಕದ ರಚನಾ ಸಭೆ ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನ ಸೂರಂಬೈಲಲ್ಲಿರುವ ಸಮನ್ವಯ ಆಡಿಟೋರಿಯಂನಲ್ಲಿ ಜರಗಲಿದೆ.
ಜು. 13 ರಂದು ಅಪರಾಹ್ನ 3.30ಕ್ಕೆ ನಡೆಯುವ ಈ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ಕಾರ್ಯಕರ್ತರು, ಸೇವಾ ಭಾರತಿಯ ಜಿಲ್ಲಾ ನೇತಾರರು ಉಪಸ್ಥಿತರಿರುವರು. ಪುತ್ತಿಗೆ ಪಂಚಾಯತಿ ವ್ಯಾಪ್ತಿಯ ಎಲ್ಲಾ ದೇಶಭಕ್ತ ಬಂಧುಗಳು ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

