ಶ್ರೀನಗರ: ಕಾರ್ಯಕ್ರಮವೊಂದರ ಉದ್ಘಾಟನೆಗೆ ಹಾಕಲಾಗಿದ್ದ ಕೇಸರಿ-ಬಿಳಿ-ಹಸಿರು ಬಣ್ಣದ ರಿಬ್ಬನ್ ಕತ್ತರಿಸಲು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬುಧವಾರ ನಿರಾಕರಿಸಿದ್ದಾರೆ. ರಿಬ್ಬನ್ ತೆಗೆದು, ಆಯೋಜಕರಿಗೆ ನೀಡಿರುವ ಅವರು, ಅದನ್ನು ಗೌರವಯುತವಾಗಿ ಮಡಚಿ ಇರಿಸುವಂತೆ ಹೇಳಿದ್ದಾರೆ.
ಇಲ್ಲಿನ ಕಾಶ್ಮೀರ್ ಹಾತ್ನಲ್ಲಿ 'ನೊ ಯುವರ್ ಆರ್ಟಿಸನ್ಸ್' ಕಾರ್ಯಕ್ರಮದ ಉದ್ಘಾಟನೆಗೆಂದು ಒಮರ್ ಆಗಮಿಸಿದ್ದರು. ರಿಬ್ಬನ್ ಕತ್ತರಿಸಿ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಬೇಕಿತ್ತು.

