ಕಾಸರಗೋಡು: ಕೇಂದ್ರ ಸರ್ಕಾರದ ವಾಹನಗಳ'ಬಾಡಿ ಕೋಡ್' ಪ್ರಕಾರ ಖಾಸಗಿ ಬಸ್ಗಳಲ್ಲಿ ಪ್ರಸಕ್ತ ಅಳವಡಿಸಲಾಗಿರುವ ಕಿಟಕಿ ಗಾಜುಗಳಿಂದ ಹವಾಮಾನ ಬದಲಾವಣೆಯನ್ವಯ ಉಂಟಾಗುವ ತೀವ್ರ ಶಾಖದಿಂದಾಗಿ ಪ್ರಯಾಣಿಕರು ಹೆಚ್ಚಿನ ಸಮಸ್ಯೆ ಅನು¨ಭವಿಸಬೇಕಾಗಿ ಬರುತ್ತಿದೆ. ಇದಕ್ಕೆ ಪರಿಹಾರವಾಗಿ, ಮುಂದೆ ಸ್ಟೇಜ್ ಕ್ಯಾರೇಜ್ ಬಸ್ಗಳಿಗೆ ಬಾಡಿ ನಿರ್ಮಾಣ ಪ್ರಕ್ರಿಯೆಯ ಸಮಯದಲ್ಲಿ ಗಾಜಿನ ಬದಲಿಗೆ ಶಟರ್ಗಳನ್ನು ಅಳವಡಿಸಲು ಅನುಮತಿ ನೀಡಬೇಕು ಮತ್ತು ಮರು ಬಾಡಿ ನಿರ್ಮಾಣ ಪ್ರಕ್ರಿಯೆ ಸಂದರ್ಭ ಆಸಕ್ತರು ಶಟರ್ಗಳಿಗೆ ಬದಲಾಯಿಸಲು ಅವಕಾಶ ನೀಡಬೇಕು ಎಂದು ಕೋರಿ ಕೇರಳ ಸರ್ಕಾರ/ ಸಾರಿಗೆ ಆಯುಕ್ತರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತಾಲ್ಲೂಕು ಖಾಸಗಿ ಬಸ್ ಮಾಲಿಕರ ಸಂಘದ ಸಾಮಾನ್ಯ ಸಭೆಯಲ್ಲಿ ತೀರ್ಮನಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಸಮಾರಂಭ ಉದ್ಘಾಟಿಸಿದರು. ಸಂಘಟನೆ ತಾಳೂಕು ಘಟಕ ಅಧ್ಯಕ್ಷ ಕೆ. ಎನ್. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿ. ಎ. ಮುಹಮ್ಮದ್ ಕುಞÂ ಸ್ವಾಗತಿಸಿದರು. ಕೋಶಾಧಿಕಾರಿ ಕಾರ್ತಿಕ್ ರಾಜ್ ವಂದಿಸಿದರು.

