ಕಾಸರಗೋಡು: ಅರಣ್ಯ, ವನ್ಯಜೀವಿ, ಪರಿಸರ ಮತ್ತು ಜೀವವೈವಿಧ್ಯದ ಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಗಳಿಗೆ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ ನೀಡುವ ವನಮಿತ್ರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮ್ಯಾಂಗ್ರೋವ್ ಅರಣ್ಯಗಳು ಔಷಧೀಯ ಸಸ್ಯಗಳು ಜೈವ ವೈವಿಧ್ಯ ಕೃಷಿ ಎಂಬಿವುಗಳ ಸಂರಕ್ಷಣೆ ಹಾಗೂ ಪೋಷಣೆಗೆ ಕೊಡುಗೆ ನೀಡಿರುವ ವ್ಯಕ್ತಿಗಳು ಶಿಕ್ಷಣ ಸಂಸ್ಥೆಗಳು ಸ್ವಯಂಸೇವಾ ಸಂಸ್ಥೆಗಳು ಮತ್ತು ರೈತರು ಎಂಬಿವರು ವನಮಿತ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ₹25,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಅರ್ಜಿದಾರರು ತಮ್ಮ ಚಟುವಟಿಕೆಗಳ ಸಂಕ್ಷಿಪ್ತ ವಿವರಣೆ, ಛಾಯಾಚಿತ್ರಗಳು ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಸೆಪ್ಟೆಂಬರ್ 10ರೊಳಗೆ ಕಾಸರಗೋಡಿನ ಸೋಶಿಯಲ್ ಫಾರೆಸ್ಟರಿ ಅಸಿಸ್ಟೆಂಟ್ ಫಾರೆಸ್ಟ್ ಕನ್ಸರ್ವೇಟರ್ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಫಾರ್ಮ್ ಕೇರಳ ಅರಣ್ಯ ಇಲಾಖೆಯ ವೆಬ್ಸೈಟ್ ತಿತಿತಿ.ಜಿoಡಿesಣ.ಞeಡಿಚಿಟಚಿ.gov.iಟಿ ಹಾಗೂ ಕಾಸರಗೋಡು ಸೋಶಿಯಲ್ ಫಾರೆಸ್ಟರಿ ಡಿವಿಷನ್ ಕಚೇರಿಯಲ್ಲಿ ಲಭ್ಯವಿದೆ. ದೂರವಾಣಿ: 9447979152.

.jpg)
