ಮಂಜೇಶ್ವರ: ಮಾದಕದ್ರವ್ಯ ಪ್ರಕರಣದ ಆರೋಪಿ ಬಂಗ್ರ ಮಂಜೇಶ್ವರದ ಅಬೂಬಕರ್ ಆಬಿದ್ ಎಂ (26)ಎಂಬಾತನನ್ನು ಪಿಟ್ ಎನ್ಡಿಪಿಎಸ್ ಆ್ಯಕ್ಟ್ ಪ್ರಕಾರ ಮಂಜೇಶ್ವರ ಠಾನೆ ಪೆÇಲೀಸರು ಬಂಧಿಸಿದ್ದಾರೆ. ಈತನನ್ನು ತಿರುವನಂತಪುರ ಪೂಜಾಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಅಬೂಬಕ್ಕರ್ ಆಬಿದ್ ವಿರುದ್ಧ ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಐದು ಮಾದಕದ್ರವ್ಯ ಪ್ರಕರಣ ದಾಖಲಾಗಿದೆ. 2025ರಲ್ಲಿ ಮಾತ್ರವಾಗಿ ಈತನ ವಿರುದ್ಧ ಇಂತಹ ಮೂರು ಪ್ರಕರಣಗಳು ದಾಖಲಾಗಿದ್ದು, ಮಾದಕದ್ರವ್ಯ ಮಾರಾಟ ಮತ್ತು ಸಾಗಾಟದಲ್ಲಿ ಈತ ಸದಾ ನಿರತನಾಗಿದ್ದನೆಂದೂ ಪೆÇಲೀಸರು ತಿಳಿಸಿದ್ದಾರೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೀಡಿದ ನಿರ್ದೇಶ ಪ್ರಕಾರ ಮಂಜೇಶ್ವರ ಪೋಲೀಸ್ ಇನ್ಸ್ಪೆಕ್ಟರ್ ಜಿಜೇಶ್ ಪಿ.ಕೆ, ಮಹಿಳಾ ಸಿವಿಲ್ ಪೋಲೀಸ್ ಆಫೀಸರ್ ವಂದನ ಅವರನ್ನೊಳಗೊಂಡ ಪೆÇಲೀಸರ ತಂಡ ಈತನನ್ನು ಬಂಧಿಸಿದೆ.

