HEALTH TIPS

No title

            ಮಂಜೇಶ್ವರ ಬಂದರು ನಿಮರ್ಾಣ ಕಾಮಗಾರಿ ಶೀಘ್ರ ಪೂರ್ಣ
                ಅಂತಿಮ ಹಂತದ ಕಾಮಗಾರಿ ಚುರುಕು
     ಮಂಜೇಶ್ವರ: ಜಿಲ್ಲೆಯ ಮೂರನೇ ಬಂದರಾಗಿ ಭಾರೀ ನಿರೀಕ್ಷೆಗಳಿರುವ ಮಂಜೇಶ್ವರ ಮೀನುಗಾರಿಕೆ ಬಂದರಿನ ನಿಮರ್ಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಈ ಬಂದರು ಲೋಕಾರ್ಪಣೆಗೊಳ್ಳುತ್ತಿರುವಂತೆ ಜಿಲ್ಲೆಯ ಅತಿ ದೊಡ್ಡ ಮಿನುಗಾರಿಕೆ ಬಂದರು ಎನಿಸಲಿದೆ.
   ನಿಮರ್ಾಣ ಕಾಮಗಾರಿಗಳಲ್ಲಿ ಹೆಚ್ಚಿನವು ಪೂರ್ಣಗೊಂಡಿರುವುದಾಗಿ ಮೀನುಗಾರಿಕೆ ಬಂದರು ಅಧಿಕಾರಿಗಳು ತಿಳಿಸಿದ್ದಾರೆ. 2019ರ ಫೆಬ್ರವರಿಯಲ್ಲಿ ಮಂಜೇಶ್ವರ ಮೀನುಗಾರಿಕೆ ಬಂದರನ್ನು ಕಾಯರ್ಾರಂಭಗೊಳಿಸಲು ಸಾಧ್ಯವಿದೆ ಎಂಬ ನಿರೀಕ್ಷೆ ಇದೆ. ಉತ್ತರ ಭಾಗದ ಬೋಟು ಲಂಗರು ಹಾಕುವ ಸ್ಥಳ ಪ್ರಸ್ತುತ 530 ಮೀಟರ್ ಉದ್ದವಿದೆ. ಇದನ್ನು ಇನ್ನೂ 200 ಮೀಟರ್ನಷ್ಟು ವಿಸ್ತರಿಸಲು ತೀಮರ್ಾನಿಸಿ ಕಾಮಗಾರಿ ನಡೆಸಲಾಗುತ್ತಿದೆ.
     ಕಾಸರಗೋಡು ಅಭಿವೃದ್ದಿ ಪ್ಯಾಕೇಜ್ನಡಿ 14.7 ಕೊಟಿ ರೂ.ನ ಆಡಳಿತಾನುಮತಿಯ ನಿಧಿಯೊಂದಿಗೆ ಈ ಬಂದರು ನಿಮರ್ಾಣ ಅಂತಿಮ ಹಂತದ ಕಾಮಗಾರಿನಡೆಯಲಿದೆ. ಮುಂದಿನ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಬಂದರಿಗೆ ಹೊಂದಿಕೊಂಡು ನಿಮರ್ಿಸುವ ಅಳಿವೆಬಾಗಿಲು ಸೇತುವೆಗೆ ಆಡಳಿತಾನುಮತಿ ಲಭಿಸಿದ್ದು, 16.7 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗುತ್ತಿದೆ.
    ಈ ಮೊತ್ತಕ್ಕಿರುವ ಅಂದಾಜು ಪಟ್ಟಿಯನ್ನು ಕಾಸರಗೊಡು ಅಭಿವೃದ್ಧಿ ಯೋಜನೆಯ ತಾಂತ್ರಿಕ ಅನುಮತಿಗಾಗಿ ಸಲ್ಲಿಸಲಾಗಿದೆ. ವಿಳಂಬಗೊಳ್ಳದೆ ಇದು ಲಭ್ಯವಾಗಲಿದೆ ಎಂಬ ನಿರೀಕ್ಷೆ ಇದೆ. ಉತ್ತರ ಭಾಗದ ಬೋಟು ಲಂಗರು ಹಾಕುವ ಸ್ಥಳ 530 ಮೀಟರ್, ದಕ್ಷಿಣ ಭಾಗದ ಬೋಟು ಲಂಗರು ಹಾಕುವ ಸ್ಥಳ 490 ಮೀಟರ್, ವಾಫರ್್ 100 ಮೀಟರ್ ವಿಸ್ತರಿಸಬಹುದಾಗಿದೆ. ಹರಾಜು ಸ್ಥಳ, ಲೋಡಿಂಗ್ ಏರಿಯಾ, ರಿಕ್ಲಮೇಶನ್ ಡ್ರಜ್ಜಿಂಗ್ 71000 ಕ್ಯೂಬಿಕ್ ಅಡಿ, ಕ್ಯಾಂಟೀನ್, ನೆಟ್ ಮೆಂಟಿಂಗ್ ಶೆಡ್, ವಕರ್್ಶಾಪ್, ಗೇರ್ ಶೆಡ್, ಅಂಗಡಿ ಕೊಠಡಿಗಳು, ವಿಶ್ರಾಂತಿ ಕೇಂದ್ರ, ಶೌಚಾಲಯಗಳು, ಗ್ರೀನ್ ಬೆಲ್ಟ್, ಪಾಕರ್ಿಂಗ್ ಏರಿಯಾ ಕಾಮಗಾರಿ ಪೂರ್ಣಗೊಂಡಿದೆ. ಆವರಣ ಗೋಡೆ ನಿಮರ್ಾಣ, ಅಪ್ರೋಚ್ ರಸ್ತೆಯ ಕಾಮಗಾರಿ ಪ್ರಗತಿ ಹಂತದಲ್ಲಿದೆ.

   ಶುದ್ಧ ನೀರು ವಿತರಣೆ, ಗೇಟ್, ಗೇಟ್ ಹೌಸ್, ವಿದ್ಯುದೀಕರಣ ಮೊದಲಾದುವುಗಳ ಕೆಲಸಗಳು ಬಾಕಿಯಿದ್ದು, ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಮರ್ಾಣ ಆರಂಭಿಸಲಾಗುವುದು. ಪ್ರವಾಹ ಸಂದರ್ಭ ಈ ಮೀನುಗಾರಿಕೆ ಬಂದರಿನಲ್ಲಿ ಸಣ್ಣ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲು ಒಂದೂವರೆ ಕೋಟಿ ರೂ.ನ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಲಾಗಿದೆ. 2014ರ ಫೆಬ್ರವರಿ 20ರಂದು ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿಯವರು ಮಂಜೇಶ್ವರ ಮೀನುಗಾರಿಕೆ ಬಂದರ್ನ ನಿಮರ್ಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ್ದರು.
   ಒಟ್ಟು 48.8 ಕೋಟಿ ರೂ. ಮೀನುಗಾರಿಕೆ ಬಂದರ್ನ ನಿಮರ್ಾಣ ವೆಚ್ಚವಾಗಿ ಅಂದಾಜಿಸಲಾಗಿದೆ. ಅಳಿವೆಬಾಗಿಲು ಸೇತುವೆ, ಬೋಟು ಲಂಗರು ಹಾಕುವ ಸ್ಥಳದ ವಿಸ್ತರಣೆ ಸಹಿತ ಒಟ್ಟು 79.8 ಕೋಟಿ ರೂ. ನಿಮರ್ಾಣ ವೆಚ್ಚವಾಗಿ ಏರಿಕೆಯಾಗುವ ಸಾಧ್ಯತೆ ಈಗಿನದು.
  ಯೋಜನಾ ವೆಚ್ಚದ ಶೇ. 75ರಷ್ಟು ಕೇಂದ್ರ ನಿಧಿಯಿಂದ, ಶೇ. 25ರಷ್ಟನ್ನು ರಾಜ್ಯ ಸರಕಾರದ ಅನುದಾನದಿಂದ ವಿನಿಯೋಗಿಸಲಾಗುವುದು. ಮೀನುಗಾರಿಕೆ ಬಂದರು ಕಾಯರ್ಾಚರಿಸಲು ಆರಂಭಿಸುವುದರೊಂದಿಗೆ 4000 ಕಾಮರ್ಿಕರಿಗೆ ನೇರವಾಗಿ ನೌಕರಿ ಲಭ್ಯವಾಗಲಿದೆ. 300 ಬೋಟುಗಳಿಗೆ ಮೀನುಗಾರಿಕೆಗೆ ಸೌಕರ್ಯ ಲಭಿಸಲಿದೆ. ಕಾಞಂಗಾಡ್ನಿಂದ ಮಂಗಳೂರಿನ ಪಣಂಬೂರಿನವರೆಗಿನ ಕರಾವಳಿ ವಲಯ ಮೀನು ಕಾಮರ್ಿಕರು ಇಲ್ಲಿ ಮೀನುಗಾರಿಕೆಗೆ ಆಗಮಿಸುತ್ತಾರೆ. ಪುಣೆ ಕೇಂದ್ರವಾಗಿರುವ ಸಿಡಬ್ಲ್ಯೂಸಿಆರ್ಎಸ್ ಸಂಭಾವ್ಯ ಅಧ್ಯಯನ ನಡೆಸಿದೆ.

    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries