ಕುಂಬಳೆ: ಮುಜಂಗಾವು ಸಾರಥಿ ಮಕ್ಕಳ ಭಜನಾ ಸಂಘದ ವತಿಯಿಂದ ರಾಮಾಯಣ ಮಾಸದ ಒಂದು ತಿಂಗಳು ಮನೆ ಮನೆ ಭಜನೆ ಸರಣಿ ಕಾರ್ಯಕ್ರಮ ಆರಂಭಿಸಲಾಯಿತು. ಇದರ ಅಂಹವಾಗಿ ಪ್ರಥಮತಃ ಮುಜುಂಗಾವು ಚಂದ್ರಹಾಸ ಶೆಟ್ಟಿಯವರ ಮನೆಯಿಂದ ಭಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಡೆದ ಸತ್ಸಂಗ ಸಭೆಯಲ್ಲಿ ಭಜನಾ ಗುರುಗಳಾದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಭಜನಾ ಸಂಘದ ಅಧ್ಯಕ್ಷರಾದ ಹರ್ಷಿತ ರವಿ ಕಾರ್ಯದರ್ಶಿ ರೋಶಿತ ಜಯಕರ, ಪದ್ಮನಾಭ, ಜಯಕರ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಭಜನಾ ಸಂಘದವರು,ಭಕ್ತ ಜನತೆ ಭಾಗಿಯಾದರು.ಈ ಸಂದರ್ಭದಲ್ಲಿ ಭಜನಾ ಗುರುಗಳಾದ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ರಾಮಾಯಣ ಮಾಸಚಾರಣಾ ಭಜನೆಯನ್ನು ಒಂದು ತಿಂಗಳ ಪಯರ್ಂತ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.