HEALTH TIPS

No title

                ಕುಟುಂಬ ಸಹಾಯ ನಿಧಿ ವಿತರಣೆ
    ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಸಹ ಸಂಘಟನೆಯಾದ ಮಚರ್ೆಂಟ್ಸ್ ಯೂತ್ ವಿಂಗ್ ಹಾಗೂ ದೇಲಂಪಾಡಿ ಕಾರುಣ್ಯ ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ  ಮುಳ್ಳೇರಿಯದಲ್ಲಿ ವ್ಯಾಪಾರಿಯಾಗಿದ್ದ ದಿ.ಸೂರ್ಯನಾರಾಯಣ ಶೆಟ್ಟಿ ಅವರ ಇಬ್ಬರ ಹೆಣ್ಣುಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಕಬಡ್ಡಿ ಪಂದ್ಯಾವಳಿಯ ಮೂಲಕ ಸಂಗ್ರಹಿಸಿದ ಸಹಾಯನಿಧಿಯ ಒಂದು ಲಕ್ಷ ರೂಪಾಯಿಯನ್ನು ವ್ಯಾಪಾರಿ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.
    ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶೆರೀಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಜೋಸ್ ತಯ್ಯಿಲ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಯೂತ್ವಿಂಗ್ ಜಿಲ್ಲಾ ಅಧ್ಯಕ್ಷ ಮಣಿಕಂಠನ್, ವನಿತಾ ವಿಂಗ್ ಅಧ್ಯಕ್ಷೆ ರೇಖಾ, ಬಾಲಕೃಷ್ಣನ್, ಯತೀಶ್ ಕುಮಾರ್ ರೈ, ಸುನಿಲ್ ಕುಮಾರ್ ಮೊಯ್ದನ್ಪಾರೆ, ರಾಜಕೀಯ ನೇತಾರರಾದ ಸಿಜಿ ಮ್ಯಾಥ್ಯು, ವಾರಿಜಾಕ್ಷನ್,  ದಾಮೋದರನ್, ಮಚರ್ೆಂಟ್ಸ್ ವೆಲ್ಪೇರ್ ಸೊಸೈಟಿ ಅಧ್ಯಕ್ಷ ಹರಿಪ್ರಸಾದ.ಎಂ.ಎಸ್, ಯೂತ್ ವಿಂಗ್ ರಕ್ಷಾಧಿಕಾರಿ ಪ್ರಸನ್ನಕುಮಾರ್.ಎಂ.ಎ, ಏಕೋಪನ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
   ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಕಾರ್ಯದಶರ್ಿ ಗಣೇಶ್ ವತ್ಸ ಸ್ವಾಗತಿಸಿ, ಕಾರುಣ್ಯ ಸ್ವಸಹಾಯ ಸಂಘದ ರಕ್ಷಾಕಾರಿ ಸಿ.ಪಿ.ಕೆ. ಅರವಿಂದನ್ ವಂದಿಸಿದರು.
         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries