ಮಂಜೇಶ್ವರ: ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ತರಣಿಸೇನ ಕಾಳಗ ತಾಳಮದ್ದಳೆ ಇತ್ತೀಚೆಗೆ ಚಿಗುರುಪಾದೆ ವೇದಮೂರ್ತಿ ಗಣೇಶ ನಾವಡರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ ಮಯ್ಯ ಕೂಡ್ಲು ಹಾಗೂ ಗೌರೀಶ ವಿಶ್ವಾಮಿತ್ರ ಶಿರಿಯ, ಚೆಂಡೆ-ಮದ್ದಳೆಯಲ್ಲಿ ವಿಕ್ರಂ ಮಯ್ಯ ಪೈವಳಿಕೆ, ಅನೂಪ್ ಸ್ವರ್ಗ, ಚಕ್ರತಾಳದಲ್ಲಿ ಕೃಷ್ಣ ಹೊಳ್ಳ ಧರ್ಮನಗರ ಸಹಕರಿಸಿದ್ದರು. ಪಾತ್ರವರ್ಗದಲ್ಲಿ ರಾಜಾರಾಮ ರಾವ್ ಮೀಯಪದವು(ತರಣಿಸೇನ), ಗುರುರಾಜ ಹೊಳ್ಳ ಬಾಯಾರು(ಶ್ರೀರಾಮ), ಯೋಗೀಶ ರಾವ್ ಚಿಗುರುಪಾದೆ(ವಿಭೀಷಣ), ಅವಿನಾಶ ಹೊಳ್ಳ ವರ್ಕಾಡಿ(ರಾವಣ), ವೇಣುಗೋಪಾಲ ಮಜಿಬೈಲು(ಸರಮೆ), ವಿಘ್ನೇಶ ಕಾರಂತ ಶಿರಿಯ(ರಾವಣ ದೂತ), ಗುರು ಪ್ರಸಾದ ಹೊಳ್ಳ ತಿಂಬರ(ಸುಪಾಶ್ರ್ವಕ) ಪಾತ್ರ ನಿರ್ವಹಿಸಿದ್ದರು.