HEALTH TIPS

ಕೊರೋನಾ ಸಾವು: ಕೇರಳದ ಇಬ್ಬರು ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ಲಭಿಸಿದ ಕೇಂದ್ರ ವಿಮೆ

                                                  

              ತಿರುವನಂತಪುರ: ಕೊರೋನಾ ತಡೆಗಟ್ಟುವ ಅಭಿಯಾನದಲ್ಲಿ ಪ್ರಾಣ ಕಳೆದುಕೊಂಡ ಆರೋಗ್ಯ ಕಾರ್ಯಕರ್ತರ ಕುಟುಂಬಗಳಿಗೆ ವಿಮಾ ರಕ್ಷಣೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಎರ್ನಾಕುಳಂ ಲಿಟಲ್ ಫ್ಲವರ್ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಟಿವಿ ಜಾಯ್,ಕೋಟ್ಟಯಂ ವೈದ್ಯಕೀಯ ಕಾಲೇಜಿನ  ಬ್ಲಡ್ ಬ್ಯಾಂಕ್ ತಂತ್ರಜ್ಞ, ಸೋಮರಾಜನ್ ಕುಟುಂಬಕ್ಕೆ ವಿಮೆಯನ್ನು ಮಂಜೂರು ಮಾಡಲಾಗಿದೆ.  ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಇಬ್ಬರ ಕುಟುಂಬಗಳಿಗೆ ತಲಾ 50 ಲಕ್ಷ ರೂ.ಮಂಜೂರುಗೊಂಡಿದೆ.

               ಆರೋಗ್ಯ ಸಚಿವೆ ಕೆ.ಕೆ.ಶೈಲಜ ಈ ಬಗ್ಗೆ ಮಾಹಿತಿ ನೀಡಿದರು. ವಿಮಾ ಹಣವು ಅವರ ಸಂಬಂಧಿಕರ ಖಾತೆಗೆ ತಲುಪಿದೆ ಎಂದು ಸಚಿವರು ಹೇಳಿದರು. ಈವರೆಗೆ ಕೇರಳದ ಆರು ಆರೋಗ್ಯ ಕಾರ್ಯಕರ್ತರು ವಿಮಾ ಹಣವನ್ನು ಪಡೆದಿದ್ದಾರೆ.

             ಕೋವಿಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಜಾಯ್  ಮತ್ತು ಸೋಮರಾಜನ್ ಕೊರೋನಾದಿಂದ ಮೃತಪಟ್ಟಿದ್ದರು. 

     ಡಾ. ಟಿವಿ ಜಾಯ್ 30 ವರ್ಷಗಳಿಂದ ಸೇವೆಯಲ್ಲಿದ್ದರು. ಜಿಲ್ಲಾ ವೈದ್ಯಕೀಯ ಅಧಿಕಾರಿಯ ನೇತೃತ್ವದಲ್ಲಿ ಲಿಟಲ್ ಫ್ಲವರ್ ಆಸ್ಪತ್ರೆಯ ಎಂಪನೆಲ್ಮೆಂಟ್ ಕ್ರಿಟಿಕಲ್ ಕೇರ್ ತಂಡದ ಪ್ರಮುಖ ಸದಸ್ಯರಾಗಿದ್ದರು. ರೋಗಿಗಳ ವೆಂಟಿಲೇಟರ್ ಆರೈಕೆಯಲ್ಲಿ, ಡಾ. ಟಿವಿ ಜಾಯ್ ಸೇವೆ ಸಲ್ಲಿಸಿದ್ದಾರೆ.

                ಸೋಮರಾಜನ್ ಅವರು 22 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿದ್ದಾರೆ. ಕೊರೋನಾ ರೋಗಿಗಳ ಆರೈಕೆಯ ಭಾಗವಾಗಿ ರಕ್ತ ಪರೀಕ್ಷೆಯಂತಹ ಹೆಚ್ಚಿನ ಅಪಾಯದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು.  ಅವರ ಪತ್ನಿ ಡಿಸಮ್ಮ ಅವರು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಮುಖ್ಯ ದಾದಿಯಾಗಿದ್ದಾರೆ. ಡಿಸಮ್ಮ ಇನ್ನೂ ಕೊರೋನಾ ಕರ್ತವ್ಯದಲ್ಲಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries