HEALTH TIPS

ಮಾನವ ಹಕ್ಕು ಆಯೋಗ ಅದಾಲತ್: 28 ಪ್ರಕರಣಗಳ ಪರಿಗಣನೆ

              ಕಾಸರಗೋಡು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಬೈಜುನಾಥ್ ಅವರು ಕಾಸರಗೋಡಿನ ಅತಿಥಿಗೃಹದಲ್ಲಿ ನಡೆಸಿದ ಅದಾಲತ್‍ನಲ್ಲಿ 28 ಪ್ರಕರಣಗಳನ್ನು ಪರಿಗಣಿಸಲಾಗಿದ್ದು,  4 ಪ್ರಕರಣಗಳಿಗೆ ತೀರ್ಪು ಕಲ್ಪಿಸಲಾಗಿದೆ.

         ಉಳಿದ ಪ್ರಕರಣಗಳನ್ನು ಮುಂದಿನ ವಿಚಾರಣೆ ಮತ್ತು ಹೆಚ್ಚಿನ ತನಿಖೆಗಾಗಿ ಕಾಯ್ದಿರಿಸಲಾಯಿತು. ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ 4 ದೂರುಗಳು ಲಭಿಸಿದೆ.  ಈ ಸಂದರ್ಭ ನ್ಯಾಯಾಂಗ ಸದಸ್ಯ ಬೈಜುನಾಥ್ ಮಾತನಾಡಿ, ಎಂಡೋಸಲ್ಫಾನ್ ಪೀಡಿತ ಮಕ್ಕಳು ಎಂಡೋಸಲ್ಫಾನ್ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದರೆ ಅದನ್ನು ಪರಿಗಣಿಸಬೇಕು. ಇದಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ತಿಳಿಸಿದರು. 

            ಹೆಚ್ಚಿನ ದೂರುಗಳು ಪೆÇಲೀಸ್ ಇಲಾಖೆಗೆ ಸಂಧಿಸಿದವುಗಳಾಗಿತ್ತು. ಜಿಲ್ಲೆಯಲ್ಲಿ ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ನಿರ್ಮಿಸಿರುವ ಮನೆಗಳನ್ನು ಎಂಡೋ ಸಂತ್ರಸ್ತರಿಗೆ ಇನ್ನೂ ಹಸ್ತಾಂತರವಾಗದಿರುವ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಆಯೋಗವು ಆಸ್ತಿ ವಿವಾದ, ಬ್ಯಾಂಕ್ ದೂರು, ಜಮೀನು ಹಕ್ಕು ದೂರು, ವೈಯಕ್ತಿಕ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಅಹವಾಲು ಸವೀಕರಿಸಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries