HEALTH TIPS

ಕೇರಳದ ಅರಣ್ಯ ವಲಯ ಪ್ರದೇಶಗಳು ಇನ್ನೂ ಹಿಂದುಳಿದಿವೆ; ಅರಣ್ಯವಾಸಿಗಳ ಮೇಲೆ ಕೇಂದ್ರ ಸರ್ಕಾರದ ವಿಶೇಷ ಗಮನ; ವನವಾಸಿ ಸಮುದಾಯದ ಮಹಿಳೆಯೊಬ್ಬರು ಭಾರತದ ರಾಷ್ಟ್ರಪತಿಯೂ ಆಗುವರು: ಫಗ್ಗನ್ ಸಿಂಗ್ ಕುಲಸ್ತೆ

                                      

                  ಪಾಲಕ್ಕಾಡ್: ಕೇರಳದ ಅರಣ್ಯ ಪ್ರದೇಶಗಳು ಇನ್ನೂ ಹಿಂದುಳಿದಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಹೇಳಿದರು. ಅರಣ್ಯದಂಚಿನ ಗ್ರಾಮಗಳಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ನೀಡುತ್ತಿದೆ. ಸರ್ಕಾರದ ಯೋಜನೆಗಳು ಅರಣ್ಯ ಪ್ರದೇಶಗಳ ಮುಖವನ್ನೇ ಬದಲಿಸುತ್ತಿವೆ. ಇದೇ ವೇಳೆ ಕೇರಳದ ಅರಣ್ಯ ಪ್ರದೇಶದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸÀರ್ಕಾರ ಹಿಂದೆ ಬಿದ್ದಿರುವುದನ್ನು ಗಮನಕ್ಕೆ ತಂದರು.

                 ಅಟ್ಟಪ್ಪಾಡಿಯಲ್ಲಿ ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್ ಆರಂಭಿಸಿರುವ ಮಲ್ಲೀಶ್ವರ ಬುಡಕಟ್ಟು ಕ್ರೀಡಾ ವಸತಿ ನಿಲಯವನ್ನು ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಇಂದು ಉದ್ಘಾಟಿಸಿದರು.

            ಅರಣ್ಯವಾಸಿ ಸಮುದಾಯದ ಮೇಲೆ ಕೇಂದ್ರ ಸರ್ಕಾರ ವಿಶೇಷ ಗಮನಹರಿಸಿದೆ.  ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಸಮುದಾಯದ ಮಹಿಳೆಯೊಬ್ಬರನ್ನು ಭಾರತದ ರಾಷ್ಟ್ರಪತಿ ಹುದ್ದೆಗೆ ಏರಿಸಿರುವುದು ಮೋದಿ ಸರಕಾರ ಅರಣ್ಯವಾಸಿಗಳ ಬಗ್ಗೆ ವಿಶೇಷ ಗಮನ ಹರಿಸುತ್ತಿರುವ ಭಾಗವಾಗಿದೆ ಎಂದು ಫಗ್ಗನ್ ಸಿಂಗ್ ಕುಲಸ್ತೆ ಹೇಳಿದರು. 

                  ಅರಣ್ಯವಾಸಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ಯಶಸ್ಸನ್ನು ಸಾಧಿಸಲು ವಿಶೇಷ ತರಬೇತಿ ಮತ್ತು ದೈಹಿಕ ಪರಿಸ್ಥಿತಿಗಳು ಅತ್ಯಗತ್ಯ. ಮಲ್ಲೀಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಆರಂಭವಾಗಲಿರುವ ಕ್ರೀಡಾ ತರಬೇತಿ ಕೇಂದ್ರ ಅದಕ್ಕೆ ಸಹಕಾರಿಯಾಗಲಿದೆ ಎಂದರು. ಪ್ರತ್ಯೇಕ ಮತ್ತು ಒರಟಾದ ಪ್ರದೇಶಗಳಲ್ಲಿಯೂ ಸಹ ಅರಣ್ಯವಾಸಿಗಳ ಅಗತ್ಯಗಳಿಗೆ ಸಮಯೋಚಿತ ನೆರವನ್ನು ಒದಗಿಸುವ ಸ್ವಾಮಿ ವಿವೇಕಾನಂದ ವೈದ್ಯಕೀಯ ಮಿಷನ್ ಕಾರ್ಯವು ಮೆಚ್ಚುಗೆಗೆ ಅರ್ಹವಾಗಿದೆ ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries