HEALTH TIPS

ಕೇರಳದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ನಡುವೆ ಯುವ ಆಯೋಗದ ಅಧ್ಯಕ್ಷರಿಂದ ಪೋಟೋ ಶೂಟ್ ಸ್ಪರ್ಧೆ: ಹೆಚ್ಚಿದ ಆತಂಕ

     

                  ಯುವಜನರ ಶ್ರೇಯೋಭಿವೃದ್ಧಿ ನಿಂತಿರುವ ಕೇರಳ ಯುವ ಆಯೋಗದ ಅಗತ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಯುವಕರು ಉದ್ಯೋಗ ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿರುವಾಗ, ಕೇರಳದ ಯುವ ಆಯೋಗದ ಅಧ್ಯಕ್ಷರು ಸಾಮಾಜಿಕ ಜಾಲತಾಣಗಳಲ್ಲಿ ಫೆÇೀಟೋಶೂಟ್ ಪ್ರದರ್ಶನವನ್ನು ದಿನನಿತ್ಯ ಹಂಚುವ ಮೂಲಕ ತೆಪ್ಪಗಾಗಿರುವರು ಎಂದು ಹೇಳಲಾಗಿದೆ. ಕೇರಳದಲ್ಲಿ ಕೋವಿಡ್‍ನಿಂದಾಗಿ ಉದ್ಯೋಗ ಕಳೆದುಕೊಂಡ ಅನೇಕ ಯುವಕರಿದ್ದಾರೆ. ಇವರಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿ ಉದ್ಯೋಗ ಕಲ್ಪಿಸಲು ಆಯೋಗ ಅಥವಾ ಸರಕಾರದಿಂದ ಯಾವುದೇ ಕ್ರಮಗಳು ಈವರೆಗೆ ರೂಪಿತಗೊಂಡಿಲ್ಲ. 

                 ಕೇರಳದಲ್ಲಿ ನಿರುದ್ಯೋಗ ಹೆಚ್ಚುತ್ತಿರುವ ಪರಿಸ್ಥಿತಿ ಇದೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ ಅನೇಕ ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಯುವ ಆಯೋಗ ಮತ್ತು ಸರ್ಕಾರಿ ವ್ಯವಸ್ಥೆಗಳು ಇನ್ನೂ ಅವರಿಗೆ ಅಗತ್ಯವಿರುವ ಸಹಾಯವನ್ನು ನೀಡಲು ಸಾಧ್ಯವಾಗದಿರುವುದು ಆಯೋಗದ ವೈಫಲ್ಯವಾಗಿದೆ. ಆದರೆ ಯಾವುದೇ ಅರ್ಹತೆ ಇಲ್ಲದ ಪಕ್ಷದ ಕಾರ್ಯಕರ್ತರಿಗೆ ಪಿಎಸ್‍ಸಿ ಮೂಲಕ ಹಲವು ಇಲಾಖೆಗಳಲ್ಲಿ ಉದ್ಯೋಗ ನೀಡಲಾಗಿದೆ. ಕೇರಳದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಸದಸ್ಯರಿಗೆ ಮಾತ್ರ ಸರ್ಕಾರಿ ನೇಮಕಾತಿಗಳನ್ನು ನೀಡಲಾಗುತ್ತಿದೆ. ಕೇರಳ ಯುವ ಆಯೋಗವು ಸಿಪಿಎಂನ ಅಂಗಸಂಸ್ಥೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳು ಹೇಳುತ್ತವೆ.

              ಪಿಎಸ್‍ಸಿ ರ್ಯಾಂಕ್ ಪಟ್ಟಿಗೆ ಸೇರಿದವರೂ ಕೂಡ ಸೆಕ್ರೆಟರಿಯೇಟ್ ಎದುರು ಧರಣಿ ನಡೆಸಬೇಕಾಗಿದೆ. ಈ ವೇಳೆ ಯುವ ಆಯೋಗದ ಅಧ್ಯಕ್ಷರು ಪ್ರತಿನಿತ್ಯ ಫೇಸ್ ಬುಕ್‍ನಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಿಂಗಳಿಗೆ 1 ಲಕ್ಷ ರೂಪಾಯಿಗೂ ಹೆಚ್ಚು ಸಂಬಳ ಪಡೆಯುವ ಅಧ್ಯಕ್ಷರ ಬೇಜವಾಬ್ದಾರಿ ಕ್ರಮವೂ ಕೇರಳದ ಯುವಕರ ಭವಿಷ್ಯ ಅತಂತ್ರವಾಗಲು ಕಾರಣವಾಗಿದೆ. ಇವತ್ತಿಗೂ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸರ್ಕಾರದಿಂದ ಅನುಮೋದಿತ ಕಾರ್ಯಕ್ರಮಗಳನ್ನು ಮಾತ್ರ ನಡೆಸಿ ಕಣ್ಣಿಗೆ ಮಣ್ಣೆರಚುವ ವಿಧಾನ. ಕಳೆದ ಹಲವು ವರ್ಷಗಳಲ್ಲಿ ಕೇರಳದ ಯುವಕರಲ್ಲಿ ಸರ್ಕಾರ ಯಾವ ಬದಲಾವಣೆ ತಂದಿದೆ ಎಂದು ಕೇಳಿದರೆ ಉತ್ತರಗಳೇನೆಂಬುದೇ ಅಯೋಮಯವಾಗಿದೆ. 

              ಶಿಕ್ಷಣ ಮುಗಿಸಿದ ಯುವಕರು ಉದ್ಯೋಗ ಅರಸಿ ಕೇರಳದ ಹೊರಗೆ ಹೋಗಬೇಕಾದ ಸ್ಥಿತಿಗೆ  ಪರಿಸ್ಥಿತಿ ಬದಲಾಗಿದೆ. ಕೊಲ್ಲಿ ರಾಷ್ಟ್ರಗಳು ಇರುವುದರಿಂದ ನಮ್ಮ ಯುವಕರಿಗೆ ಸ್ವಲ್ಪ ಮಟ್ಟಿಗೆ ಅಲ್ಲಿ ಉದ್ಯೋಗ ಸಿಗುತ್ತಿದೆ. ಕೇರಳ ಅಭಿವೃದ್ಧಿ, ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳುವ ಮುಖ್ಯಮಂತ್ರಿ ತಮ್ಮ ದೇಶದ ಯುವಕರನ್ನು ಗೇಲಿ ಮಾಡುತ್ತಿದ್ದಾರೆ ಎನ್ನುತ್ತಾರೆ. ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗ ಪಡೆಯಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದಾಗ, ಕೇರಳ ಯುವ ಆಯೋಗ ಮತ್ತು ಸರ್ಕಾರ ಅದನ್ನು ವಿರೋಧಿಸುವ ವಿಧಾನವನ್ನು ತೆಗೆದುಕೊಂಡಿತು.

                 ಯುವ ವಯಸ್ಕರಲ್ಲಿ ದೈನಂದಿನ ಮಾದಕ ದ್ರವ್ಯ ಸೇವನೆಯು ಹೆಚ್ಚುತ್ತಿದೆ. ನಮ್ಮ ಯುವ ಪೀಳಿಗೆಯು ಹೊರಗಿನಿಂದ ಗಡಿ ದಾಟಿ ಬರುವ ಡ್ರಗ್ ಡೀಲರ್‍ಗಳ ಏಜೆಂಟ್‍ಗಳಾಗುತ್ತಿದೆ. ಈ ಮಾರಣಾಂತಿಕ ಮಾದಕ ವಸ್ತುಗಳ ಸೇವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವುಗಳನ್ನು ಶಾಲಾ-ಕಾಲೇಜುಗಳಲ್ಲಿ ಸುಲಭವಾಗಿ ಮಾರಾಟ ಮಾಡಲಾಗುತ್ತದೆ. ಮಾದಕ ವ್ಯಸನದ ವಿರುದ್ಧ ಆಯೋಗ ಮತ್ತು ಕೇರಳ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಮಾದಕ ವಸ್ತುಗಳ ಸೇವನೆ ತೀವ್ರವಾಗಿ ಹೆಚ್ಚುತ್ತಿದೆ. ಯುವಕರ ಒಂದು ವಿಭಾಗವು ಉದ್ಯೋಗ ಕಳೆದುಕೊಂಡ ನಂತರ ಮದ್ಯ ಮತ್ತು ಮಾದಕ ವ್ಯಸನಕ್ಕೆ ಒಳಗಾಗುತ್ತಾರೆ. ಇದೇ ವೇಳೆ ಯುವಕರು ದಿನಗಟ್ಟಲೆ ಸರ್ಕಾರಿ ಕಟ್ಟಡಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದರೆ, ಕೇರಳದ ಯುವ ಆಯೋಗದ ಅಧ್ಯಕ್ಷೆ ಚಿಂತಾ ಜೆರೋಮ್ ಪ್ರತಿದಿನ ಫೇಸ್‍ಬುಕ್‍ನಲ್ಲಿ ಪೋಟೋ ಶೂಟ್‍ಗಳನ್ನು ತೋರಿಸಿ ಗೇಲಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳು ಹೇಳುತ್ತವೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries