ಬದಿಯಡ್ಕ: ಅಸ್ಥಿಮಜ್ಜೆ ಕಸಿ(ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟೇಶನ್)ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿರುವ ಸಾನ್ವಿ ಮತ್ತು ಕುಟುಂಬ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಬಾಲಕಿ ತಂದೆ ಉದಯ, ತಾಯಿ ಸವಿತಾ, ಅಸ್ಥಿಮಜ್ಜೆ ದಾನಿಯಾಗಿರುವ ಸಹೋದರಿ ತನುಜಶ್ರೀ, ಚಿಕಿತ್ಸಾ ಸಮಿತಿ ರಕ್ಷಾಧಿಕಾರಿ ಆನಂದ ಕೆ. ಮವ್ವಾರು, ಪದಾಧಿಕಾರಿಗಳಾದ ರವೀಂದ್ರ ರಐ ಗೋಸಾಡ, ಶಶಿಧರ ತೆಕ್ಕೆಮೂಲೆ ಮುಂತಾದವರು ಉಪಸ್ಥಿತರಿದ್ದರು. ಚಿಕಿತ್ಸಾ ಸಹಾಯಕ್ಕಾಗಿ ಸಮಿತಿ ರಚಿಸುವ ಮೊದಲು ಸಮಿತಿ ಪದಾಧಿಕಾರಿಗಳು ಎಡನೀರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು. ಚಿಕಿತ್ಸೆಗೆ ತೆರಳಲಿರುವ ಸಾನ್ವಿಯನ್ನು ಶ್ರೀಗಳು ಹರಸಿದರು.