HEALTH TIPS

ಜಿ.ಎಸ್.ಟಿ. ವಿಚಾರದಲ್ಲಿ ಮರ್ಯಾದೆ ಉಳಿಸಿಕೊಳ್ಳುವ ಯತ್ನದಲ್ಲಿ ಮುಖ್ಯಮಂತ್ರಿ: ಐμÁರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ಕೇರಳ ಕೇಳಿಕೊಂಡಿದೆಯೇ ಹೊರತು ಅಗತ್ಯ ವಸ್ತುಗಳ ಮೇಲಲ್ಲ ಎಂದ ಪಿಣರಾಯಿ ವಿಜಯನ್


           ನವದೆಹಲಿ: ಜಿ.ಎಸ್.ಟಿ. ವಿಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಖ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಮೇಲಲ್ಲ, ಐμÁರಾಮಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸುವಂತೆ ಕೇರಳ ಕೇಳಿಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿರುವರು. ಅಕ್ಕಿಗೆ ಜಿಎಸ್‍ಟಿಯನ್ನು ಪ್ರಸ್ತಾಪಿಸಿದ ರಾಜ್ಯಗಳಲ್ಲಿ ಕೇರಳವೂ ಸೇರಿದೆ. ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಕಿ ಮೇಲೆ ಜಿಎಸ್ ಟಿ ವಿಧಿಸುವಂತೆ ಮನವಿ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ವಿವರಣೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದರು.
                   ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೆಚ್ಚಳವನ್ನು ಕೇರಳ ಜಾರಿಗೊಳಿಸುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ. ಜನರ ಮೇಲೆ ಪರಿಣಾಮ ಬೀರುವ ತೆರಿಗೆ ಹೆಚ್ಚಳದ ವಿರುದ್ಧ ಸರ್ಕಾರ ಯಾವಾಗಲೂ ವಿರುದ್ದವಾಗಿಯೇ ಇರುತ್ತದೆ. ಜಿಎಸ್‍ಟಿ ದರ ಹಿಂಪಡೆಯುವಂತೆ ಕೇಂದ್ರಕ್ಕೆ ಪತ್ರ ಕಳುಹಿಸಲಾಗಿದೆ. ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಅಗತ್ಯವಿಲ್ಲ ಎಂಬ ಜಿಎಸ್‍ಟಿ ಕೌನ್ಸಿಲ್‍ನ ನಿಲುವನ್ನು ರಾಜ್ಯ ಸರ್ಕಾರ ಯಾವಾಗಲೂ ಎತ್ತಿ ಹಿಡಿದಿದೆ ಎಂದೂ ಮುಖ್ಯಮಂತ್ರಿ ವಿವರಿಸಿದರು.
          ನಾನಾ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಮೂಲಕ ಸರಕಾರ ಮುನ್ನಡೆಯುತ್ತಿದೆ. ಇದೇ ವೇಳೆ ರಾಜ್ಯಗಳ ಸಾಲದ ಮಿತಿ ಮೇಲೆ ನಿಬರ್ಂಧ ಹೇರುವುದು ಕೇಂದ್ರದ ನಿರ್ಧಾರ. ಈ ಕ್ರಮ ಸರಿಯಲ್ಲ. ಕಿಫ್ಬಿ ಮೂಲಕ ಅಭಿವೃದ್ಧಿಗೆ ಅಡ್ಡಿಪಡಿಸಲು ಕೇಂದ್ರ ಯತ್ನಿಸುತ್ತಿದೆ. ಕೇಂದ್ರದ ಸಾಲವನ್ನು ರಾಜ್ಯವು ಕಿಪ್ಬಿ ಆದಾಯದಿಂದ ಮರುಪಾವತಿಸುತ್ತದೆ. ಇದನ್ನು ಸರ್ಕಾರದ ಸಾಲ ಎಂದು ಅರ್ಥೈಸಲು ಸಾಧ್ಯವಿಲ್ಲ. ಇದು ಸರ್ಕಾರದ ಖಾತರಿ ಸಾಲವಾಗಿದೆ. ಮಾರುಕಟ್ಟೆ ಸಾಲ ಮಿತಿ ಕಡಿತಗೊಳಿಸುವ ನಿರ್ಧಾರದಿಂದ ಕೇಂದ್ರ ಹಿಂದೆ ಸರಿಯಬೇಕು. ರಾಜ್ಯವನ್ನು ಒಡೆಯುವ ಯತ್ನದ ಫಲವಾಗಿ ಕೇಂದ್ರವು ಸಾಲದ ಮಿತಿಯನ್ನು ಕಡಿಮೆ ಮಾಡಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries