HEALTH TIPS

ಭಾರೀ ಮಳೆ; ಕಾಸರಗೋಡಿನ ಎರಡು ತಾಲೂಕುಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ: ಜಿಲ್ಲಾಧಿಕಾರಿ

 
             ಕಾಸರಗೋಡು: ಭಾರೀ ಮಳೆಯಿಂದಾಗಿ ಕಾಸರಗೋಡು ಜಿಲ್ಲೆಯ ಹೊಸದುರ್ಗ ಮತ್ತು ವೆಳ್ಳರಿಕುಂಡ್ ತಾಲೂಕಿನಲ್ಲಿ ವೃತ್ತಿಪರ ಕಾಲೇಜುಗಳು, ಅಂಗನವಾಡಿಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ತಿಳಿಸಿದ್ದಾರೆ. ರಜೆಯ ಕಾರಣ ನಷ್ಟವಾಗುವ ಅಧ್ಯಯನದ ಸಮಯವನ್ನು ಹೊಂದಿಸಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
           ಜಿಲ್ಲೆಯ ಎಲ್ಲೆಡೆ ಸಾಧಾರಣ ಮಳೆಯಾಗಿದೆ. ಯಾವುದೇ ಪ್ರತಿಕೂಲ ಘಟನೆಗಳು ವರದಿಯಾಗಿಲ್ಲ. ಪ್ರಸ್ತುತ ವೆಳ್ಳರಿಕುಂಡ್ ತಾಲೂಕಿನ ಬಳಾಲ್ ಗ್ರಾಮದಲ್ಲಿ ಶಿಬಿರ ನಿರ್ಮಿಸಲಾಗಿದೆ. ಸದ್ಯ ಶುಕ್ರವಾರವೂ ಆರೆಂಜ್ ಅಲರ್ಟ್ ಮುಂದುವರಿದಿದೆ.
         ಈ ನಡುವೆ ಗುರುವಾರ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಶಿಥಿಲಗೊಂಡಿರುವ ಚಿತ್ತಾರಿಕಲ್ ಭೀಮಾನದಿ ರಸ್ತೆಗೆ ಭೇಟಿ ನೀಡಿದರು. ರಸ್ತೆ ದುಸ್ಥಿತಿಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದನ್ನು ಅನುಸರಿಸಿ, ಬಸ್ಸುಗಳು ಕುನ್ನುಮ್ಕೈ ಮೂಲಕ ಸಂಚರಿಸಿದವು. ಈ ರಸ್ತೆ ಮೂಲಕ ಸಂಚಾರ ಮುಂದುವರಿಸಲು ಸಾಧ್ಯವಿಲ್ಲ ಎಂದು ಬಸ್‍ಗಳು ಮುಷ್ಕರ ನಡೆಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ. ಚಿತ್ತಾರಕಲ್ಲಿನಿಂದ ನರ್ಕಿಲಕಾಡಿಗೆ ಸುಮಾರು 10 ಕಿ.ಮೀ ಪ್ರಯಾಣಿಸಿದ ನಂತರ ಜಿಲ್ಲಾಧಿಕಾರಿ ಪರಿಸ್ಥಿತಿ ಅವಲೋಕಿಸಿದರು. ಸ್ಥಳೀಯ ಜನರು, ವಿದ್ಯಾರ್ಥಿಗಳು ಮತ್ತು ಬಸ್ ಮಾಲೀಕರಿಂದ ಪ್ರಶ್ನೆಗಳನ್ನು ಕೇಳಿದರು. ವೆಳ್ಳರಿಕುಂಡ್ ಜಂಟಿ ಆರ್‍ಟಿಒ ಮರ್ಸಿಕುಟ್ಟಿ ಸ್ಯಾಮ್ಯುಯೆಲ್, ಪಿಡಬ್ಲ್ಯುಡಿ, ಕೆಐಎಫ್‍ಬಿ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬಸ್ ಮಾಲೀಕರು, ಸಾರ್ವಜನಿಕರು ಜಿಲ್ಲಾಧಿಕಾರಿಯೊಂದಿಗೆ ಇದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries