HEALTH TIPS

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಅಂಚೆ ನೌಕರರ ಫೆಡರೇಶನ್ ವತಿಯಿಂದ ಧರಣಿ


                 ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿಕೊಂಡು ಭಾರತೀಯ ಅಂಚೆ ನೌಕರರ ಫೆಡರೇಶನ್ (ಬಿಪಿಇಎಫ್) ಆಶ್ರಯದಲ್ಲಿ ಅಂಚೆ ಇಲಾಖೆ ಕಾಸರಗೋಡು ವಿಭಾಗೀಯ ಕಚೇರಿ ಎದುರು ಧರಣಿ ನಡೆಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ವಿ. ವಿ. ಬಾಲಕೃಷ್ಣ ಉದ್ಘಾಟಿಸಿದರು.
            ವಿಭಾಗದ ಅಧ್ಯಕ್ಷ ಪಿ. ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದರು.
12,24,36 ವರ್ಷಗಳ ಸೇವೆ ನಂತರ ಗ್ರಾಮೀಣ ಡಾಕ್ ಸೇವಾ(ಜಿ.ಡಿ.ಎಸ್)ಸಿಬ್ಬಂದಿಗೆ ಎರಡು ಮುಂಗಡ ಏರಿಕೆಯೊಂದಿಗೆ ಗ್ರೇಡಿಂಗ್ ನೀಡಬೇಕು, ಕಾಸರಗೋಡಿನ ವಿಂಗಡಣಾ ವಿಭಾಗವನ್ನು ಕಣ್ಣೂರಿನ ಆರ್‍ಎಂಎಸ್‍ನೊಂದಿಗೆ ವಿಲೀನಗೊಳಿಸುವುದನ್ನು ತಡೆಗಟ್ಟಬೇಕು, ಹಳೆಯ ಶಾಸನಬದ್ಧ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ಬಿಪಿಇಎಫ್ ಜಿಲ್ಲಾ ಸಮಿತಿ ಸದಸ್ಯ ಕೋಟೋಟಿ ನಾರಾಯಣನ್, ಎನ್‍ಜಿಒ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ರಾಜನ್, ಕೆಎಸ್‍ಟಿ ನೌಕರರ ಸಂಘದ ಘಟಕದ ಅಧ್ಯಕ್ಷ ಸಿ. ಎಚ್. ಹರೀಶ್ ಕುಮಾರ್, ಮುಖಂಡರಾದ ಪಿ. ದೇವದಾಸ್, ಕೆ. ಮನೋಜ್, ಟಿ. ಭಾಸ್ಕರನ್, ಕೆ. ಮೋಹನನ್ ಉಪಸ್ಥಿತರಿದ್ದರು. ಬಿಪಿಇಎಫ್ ವಿಭಾಗದ ಸಂಚಾಲಕ ಬಿ. ವಾಸುದೇವ ಸ್ವಾಗತಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries