ಬದಿಯಡ್ಕ: ಅಸ್ತಿತ್ವಂ ಪ್ರತಿμÁ್ಠನ ಕುಂಟಾರು ಇದರ ನಿರಂತರ ಆರೋಗ್ಯ ಅಭಿಯಾನ ಎಂಬ ಸರಣಿಯ ನಾಲ್ಕನೇ ಶಿಬಿರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಕಾರದೊಂದಿಗೆ ಬದಿಯಡ್ಕ ಶ್ರೀಗಣೇಶ ಮಂದಿರದಲ್ಲಿ ಜರುಗಿತು. ಪುತ್ತೂರಿನ ಖಾಸಗೀ ಸುದ್ದಿ ಮುಖ್ಯಸ್ಥ ಶ್ಯಾಂ ಸುದರ್ಶನ್ ಭಟ್ ಹೊಸಮೂಲೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಸರಗೋಡು ಆರೋಗ್ಯ ಕ್ಷೇತ್ರದಲ್ಲಿ ಅತಿ ಹಿಂದುಳಿದಿದೆ. ಯಾವುದೇ ಪಕ್ಷ ಕೇರಳದಲ್ಲಿ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿಯ ಸಾಮಾನ್ಯ ಜನರಿಗೆ ಬಹುದೂರದ ಮಂಗಳೂರಿನ ಆಸ್ಪತ್ರೆಗಳೇ ಆಶ್ರಯ. ಅಸ್ತಿತ್ವ ಪ್ರತಿμÁ್ಠನವು ಹಲವು ಸಂಘಟನೆಗಳ ಸಹಕಾರದೊಂದಿಗೆ ವಿವಿಧ ಆಸ್ಪತ್ರೆಗಳನ್ನು ಜೋಡಿಸಿಕೊಂಡು ನಿರಂತರ 24 ವಾರಗಳ ಆರೋಗ್ಯ ಅಭಿಯಾನ ಎಂಬ ಕಾರ್ಯಕ್ರಮ ನಡೆಸುತ್ತಿರುವುದು ಸಾಮಾನ್ಯ ಜನರಿಗೆ ಒಂದು ವರದಾನವೇ ಆಗಿದೆ. ಸದುಪಯೋಗಪಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮಾಭಿವೃದ್ದಿ ಯೋಜನೆಯ ಬದಿಯಡ್ಕ ವಲಯ ಅಧ್ಯಕ್ಷ ರೋಹಿತಾಕ್ಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೇಲ್ವಿಚಾರಕ ದಿನೇಶ ಕೊಕ್ಕಡ, ಅಸ್ತಿತ್ವಂ ಪ್ರತಿμÁ್ಠನದ ಪ್ರಧಾನ ಸಂಚಾಲಕ ಎಸ್.ಎಂ ಉಡುಪ ಕುಂಟಾರು, ಪ್ರತಿμÁ್ಠನದ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಉಪಸ್ಥಿತರಿದ್ದು ಶುಭಶಂಸನೆಗೈದರು. ಅಖಿಲೇಶ್ ನಗುಮುಖಂ ಮುಖ್ಯ ಅತಿಥಿಯಾಗಿದ್ದರು.
ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಜಲಜಾಕ್ಷಿ ಸ್ವಾಗತಿಸಿ, ಕವಿತಾ ವಂದಿಸಿದರು. ಸುಮಾರು 250 ಕ್ಕೂ ಹೆಚ್ಚು ಮಂದಿ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.