ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕಾಡಂಕೋಡ್ ಶಾಂತಿ ತೀರ ಪ್ರದೇಶದಲ್ಲಿ ಕಿರು ಅರಣ್ಯ ನಿರ್ಮಿಸುವ ಮೂಲಕ 'ಅಮೃತ ವನಂ' ಯೋಜನೆಗೆ ಚಾಲನೆ ನೀಡಲಾಯಿತು.
ಯೋಜನೆಯ ಅಂಗವಾಗಿ ಕಾಡಂಗೋಡು ಶಾಂತಿ ತೀರ ವಠಾರದಲ್ಲಿ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ. ಸಜಿತ್ ಉದ್ಘಾಟಿಸಿದರು.
ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ, ಚೆರುವತ್ತೂರಿನ ಭೂಮಿತ್ರಸೇನೆ ಕ್ಲಬ್, ಸರ್ಕಾರಿ ಮೀನುಗಾರಿಕಾ ವಿಎಚ್ಎಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕಾಡಂಗೋಡು ಶಾಂತಿ ತೀರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಅರಣ್ಯ ಯೋಜನೆಯನ್ನು ನಡೆಸಲಾಗುತ್ತಿದೆ. ಯೋಜನೆಯನ್ವಯ ಜಿಲ್ಲೆಯಲ್ಲಿ ಇಪ್ಪತ್ತು ಕಿರು ಅರಣ್ಯಗಳ ಪೈಕಿ ಅತಿ ದೊಡ್ಡ ಅರಣ್ಯೀಕರಣ ಯೋಜನೆ ಇದಾಗಿದೆ.
ಅರಣ್ಯೀಕರಣ ಯೋಜನೆಗೆ ಭೂಮಿ ಮಂಜೂರು ಮಾಡಿದ ಜೀವವೈವಿಧ್ಯ ಮಂಡಳಿಯ ಮಾಜಿ ಸದಸ್ಯ ಕಾರ್ಯದರ್ಶಿ ಮತ್ತು ಹೊಸದುರ್ಗ ಡಿವೈಎಸ್ಪಿ ಡಾ.ವಿ.ಬಾಲಕೃಷ್ಣನ್ ಅವರು ಶಾಂತಿ ತೀರ ಸಮಿತಿಗೆ ಪ್ರಶಂಸಾ ಪತ್ರವನ್ನು ನೀಡಿದರು. ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಶಾಲಾ ಪಿಟಿಎ ಅಧ್ಯಕ್ಷ ಇ. ವಿ ಶಾಜಿ ಅಧ್ಯಕ್ಷತೆ ವಹಿಸಿದ್ದರು. ಮದರ್ ಪಿಟಿಎ ಅಧ್ಯಕ್ಷೆ ಕೆ.ಸವಿತಾ, ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ವಿ.ಪವಿತ್ರನ್, ಮುಖ್ಯ ಶಿಕ್ಷಕಿ ಹೇಮಲತಾ, ಶಾಂತಿ ತೀರ ಕಾರ್ಯದರ್ಶಿ ಕೆ.ವಿ.ಪೀತಾಂಬರನ್, ಎಂ.ವಿ.ರಾಜು, ಭೂಮಿತ್ರ ಸೇನೆಯ ಸಂಯೋಜಕಿ ಟಿ.ಸುಜಿತಾ, ಕಾರ್ಯಕ್ರಮಾಧಿಕಾರಿ ಜಿಜೀನಾ ಹಾಗೂ ಹಿರಿಯ ಶಿಕ್ಷಕ ಎಸ್.ಸಾಜಿ ುಪಸ್ಥಿತರಿದ್ದರು.ವಿಎಚ್ಎಸ್ಇ ಪ್ರಾಂಶುಪಾಲ ವಿ. ಕೆ.ರಾಜೇಶ್ ಸ್ವಾಗತಿಸಿದರು. ಸಿಬ್ಬಂದಿ ಸಂಯೋಜಕ ಎಂ. ಪಿ ಮನೋಜನ್ ವಂದಿಸಿದರು.
'ಆಜಾದಿ ಕಾ ಅಮೃತ್ ಮಹೋತ್ಸವ್'-ಅಮೃತವನಂ ಯೋಜನೆಗೆ ಚಾಲನೆ
0
August 03, 2022
Tags