ಕಾಸರಗೋಡು: ಬದಿಯಡ್ಕ ಪಂಚಾಯಿತಿ ನೀರ್ಚಾಲು ಕಲ್ಲಕಟ್ಟ ಮರ್ದಂಬೈಲು ನಿವಾಸಿ ದಿ.ರಾಜೀವ್ ಎಂಬವರ ಪುತ್ರ ಆದರ್ಶ(26)ಹಾಸನದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆದರ್ಶ ಅವರು ಬೆಂಗಳೂರಿನ ಐ.ಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಹಾಸನದ ಬೇಲೂರಿನಲ್ಲಿ ಸ್ನೇಹಿತನ ಮದುವೆಗೆ ಕಾರಿನಲ್ಲಿ ತೆರಳಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಸ್ತೆ ಬದಿ ಮರಕ್ಕೆ ಡಿಕ್ಕಿಯಾಗಿ ಆದರ್ಶ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇವರ ಜತೆಗಿದ್ದ ನಾಲ್ಕು ಮಂದಿ ಸ್ನೇಹಿತರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತದೇಹ ಶವಮಹಜರು ನಡೆದ ನಂತರ ಊರಿಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಹಾಸನದಲ್ಲಿ ಅಪಘಾತ: ನೀರ್ಚಾಲು ಕಲ್ಲಕಟ್ಟ ನಿವಾಸಿ, ಐಟಿ ಉದ್ಯೋಗಿ ಮೃತ್ಯು
0
August 09, 2022