HEALTH TIPS

ಮಂಜೇಶ್ವರ ಠಾಣೆಯಲ್ಲಿ ಹುಟ್ಟುಹಬ್ಬಆಚರಿಸಿದ ವರ್ಕಾಡಿಯ ಬಾಲಕ ಆಶಿಲ್


                  ಮಂಜೇಶ್ವರ: ಇಲ್ಲೊಬ್ಬ ಬಾಲಕನು ತನ್ನ ಹುಟ್ಟುಹಬ್ಬವನ್ನು ಪೋಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಮಹದಾಸೆಯನ್ನು ಮಂಜೇಶ್ವರ ಪೋಲೀಸ್ ಠಾಣೆಯ ಜನಕೀಯ ಪೋಲೀಸರು ಈಡೇರಿಸಿದ್ದಾರೆ.



               ವರ್ಕಾಡಿಯ ಅಝೀಝ್ ಕಲ್ಲೂರು - ಆರಿಫಾ ದಂಪತಿಯ ಪುತ್ರ , ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ಆಗಸ್ಟ್ 6 ರಂದು ಶನಿವಾರ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು. ತನ್ನ ಹುಟ್ಟುಹಬ್ಬವನ್ನು ಪೋಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶೀಲ್ ತಂದೆತಾಯಿ ಬಳಿ ಪಟ್ಟು ಹಿಡಿದಿದ್ಜೇ, ತಂದೆ ಅಝೀಜ್ ಕಲ್ಲೂರುರವರು ಮಂಜೇಶ್ವರ ಠಾಣೆಯ ಜನಕೀಯ ಪೋಲೀಸರನ್ನು ಸಂಪರ್ಕಿಸಿದರು.


            ಆಶೀಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಮಂಜೇಶ್ವರ ಪೋಲೀಸರು ಅವಕಾಶ ಮಾಡಿಕೊಟ್ಟರು. ಮಂಜೇಶ್ವರ ಸರ್ಕಲ್ ಇನ್ಸ್ ಪೆಕ್ಟರ್ ಸಂತೋμï ಕುಮಾರ್, ಎಸ್ ಐ ಟೋನಿ, ಅನ್ಸಾರ್ ಸಹಿತ ಠಾಣೆಯ ಪೋಲೀಸರು ಆಶೀಲ್ ನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಶುಭಹಾರೈಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries