ಕುಂಬಳೆ: ಭಾರತಜ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉದ್ದೇಶದಿಂದ ಕೋಝಿಕ್ಕೋಡ್ ನ ಇಬ್ಬರು ವಿದ್ಯಾರ್ಥಿಗಳು ದೇಶ ಪರ್ಯಟನೆಯಲ್ಲಿದ್ದಾರೆ. ಪೆರುಮಣ್ಣ ಮಂಚಪರಮ್ಮಾಳ್ ಫೈಸಲ್ ಅವರ ಪುತ್ರ, ಪ್ಲಸ್ ಟು ವಿದ್ಯಾರ್ಥಿ ಮುಹಮ್ಮದ್ ರಿಫಾನ್ ಹಾಗೂ ಕೂರಚುಂಡ್ ಕುರುಡಿಯಾತ್ ನಿವಾಸಿ ಜಮ್ಶೀರ್ ಕಾಲ್ನಡಿಗೆಯಲ್ಲಿ ದೇಶ ಸುತ್ತುತ್ತಿದ್ದಾರೆ. ಸ್ವಾತಂತ್ರ್ಯದ 75ನೇ ವμರ್Áಚರಣೆಯ ಅಂಗವಾಗಿ ಇಂತಹ ಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ. ಆರಂಭದಲ್ಲಿ ವ್ಯಾನ್ನಲ್ಲಿ ಪ್ರಯಾಣಿಸಲು ಚಿಂತಿಸಿದವರು ಹಣದ ಕೊರತೆಯಿಂದ ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದೇವೆ ಎಂದು ಇಬ್ಬರೂ ಹೇಳಿರುವರು.
ಇವರಿಬ್ಬರೂ ಇದೇ ತಿಂಗಳ 1ರಂದು ಕೋಝಿಕ್ಕೋಡ್ ಪೆರುಮಣ್ಣದಿಂದ ಪ್ರಯಾಣ ಆರಂಭಿಸಿದ್ದರು. ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಲು ಉದ್ದೇಶಿಸಿದ್ದಾರೆ. ಅಲ್ಲಿನ ಜನರು, ಭಾμÉ ಮತ್ತು ಸಂಸ್ಕøತಿಗಳ ಬಗ್ಗೆ ನೇರವಾಗಿ ತಿಳಿದುಕೊಳ್ಳುವುದು ಈ ಪ್ರವಾಸದ ಹಿಂದಿನ ಉದ್ದೇಶವಾಗಿದೆ. ಕೈಯಲ್ಲಿ ಐದು ಪೈಸೆಯಿಲ್ಲದೆ ಪ್ರಯಾಣ ಶುರುಮಾಡಿರುವರು. ದಿನನಿತ್ಯದ ಖರ್ಚಿಗೆ ಪ್ರಯಾಣದ ವೇಳೆ ಅಲ್ಲಲ್ಲಿ ಜನರು ನೀಡುವ ಸಹಾಯ ಮಾತ್ರ ಇವರಲ್ಲಿರುವುದು. ಹಣ ಸಿಗದಿದ್ದರೆ ದುಡಿದು ದೇಶ ಸುತ್ತಲು ಸಿದ್ಧ ಎಂದಿರುವರು.
ಪೆಟ್ರೋಲ್ ಪಂಪ್ಗಳು ಮತ್ತು ಟೆಂಟ್ಗಳಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಾರೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಭಾರತದ ಪೂರ್ವ ಗಡಿ ರಾಜ್ಯಕ್ಕೆ ತಲಪಲು ಉದ್ದೇಶಿಸಿದ್ದಾರೆ. ಕೊನೆಗೆ ತಮಿಳುನಾಡಿಗೆ ಭೇಟಿ ನೀಡಿ ಕೇರಳಕ್ಕೆ ವಾಪಸ್ಸಾಗುವುದು ಇವರ ಯೋಜನೆ. ಜಮ್ಶೀರ್ ಮತ್ತು ರಿಫಾನ್ ಟೀಮ್ ಟೆಕ್ ರೋಡ್ ಮಾಸ್ಟರ್ ಉಪಯೋಗಿಸಿದ ಕಾರ್ ಚಾನೆಲ್ ನ್ನು ನಡೆಸುತ್ತಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಭಾರತವನ್ನು ಸುತ್ತಿ ಮನೆ ತಲುಪಬೇಕೆಂಬುದು ಅವರ ಆಸೆ. ಕಾಸರಗೋಡು ಜಿಲ್ಲೆ ಪ್ರವೇಶಿಸಿದ ನಂತರ ತಲಪ್ಪಾಡಿ ಮೂಲಕ ಇಬ್ಬರೂ ಕರ್ನಾಟಕ ಪ್ರವೇಶಿಸಲಿದ್ದಾರೆ. ಗುರುವಾರ-ಶುಕ್ರವಾರ ಜಿಲ್ಲೆಯ ವಿವಿಧೆಡೆ ಸಂಚರಿಸಿದರು.