HEALTH TIPS

ದಾಳಿಕೋರರಿಗೆ ಆಡಳಿತದ ಭಯವಿಲ್ಲ: ಏನು ಬೇಕಾದರೂ ಆಗಬಹುದು ಎಂದು ಭಾವಿಸುತ್ತಾರೆ: ಹರತಾಳಕ್ಕೆ ಕೋರ್ಟ್ ಟೀಕೆ


                   ಕೊಚ್ಚಿ: ಪಾಪ್ಯುಲರ್ ಫ್ರಂಟ್ ಹರತಾಳವನ್ನು ಮತ್ತೆ ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಎನ್‍ಐಎ ತನಿಖೆಯ ಹೆಸರಿನಲ್ಲಿ ಪಿಎಫ್ ಐ ಹರತಾಳ ನಡೆಸಲು ಕಾರಣ ಅದಕ್ಕೆ ಕಾನೂನು ವ್ಯವಸ್ಥೆಗಳ ಭಯವಿಲ್ಲ ಎಂದು ನ್ಯಾಯಾಲಯ ಬೊಟ್ಟುಮಾಡಿದೆ.
                  ದಾಳಿಕೋರರಿಗೆ ಏನಾಗಬಹುದು ಎಂಬ ಕಲ್ಪನೆ ಇದೆ ಎಂದು ನ್ಯಾಯಾಲಯ ಟೀಕಿಸಿದೆ.
                   ಆಡಳಿತದ ಬಗ್ಗೆ ಭಯ ಇಲ್ಲದ ಕಾರಣ ಕಾನೂನು ಉಲ್ಲಂಘನೆಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಆರೋಪಿಸಿದೆ. ಹರತಾಳ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲಿನ ಹಿಂಸಾಚಾರವನ್ನು ಹೈಕೋರ್ಟ್ ಟೀಕಿಸಿದೆ.ಸರಿಯಾದ ಮನಸ್ಸಿನ ಜನರು ಇಂತಹ ಹಿಂಸಾಚಾರವನ್ನು ಮಾಡುವುದಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.
                    ಅಕ್ರಮ ಹರತಾಳಕ್ಕೆ ಕರೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಾಲಯ ಪ್ರಜಾಸತ್ತಾತ್ಮಕ ಮುಷ್ಕರದ ವಿರುದ್ಧ ಅಲ್ಲ. ಆದರೆ ಇಂದಿನ ಮಿಂಚಿನ ಹರತಾಳ ಅಕ್ರಮ. ಹರತಾಳದ ಅಂಗವಾಗಿ ಆಗುವ ಎಲ್ಲಾ ನಷ್ಟಗಳಿಗೆ ಕರೆ ಮಾಡಿದವರ ಹೊಣೆ ಎಂದು ಹೈಕೋರ್ಟ್ ತೀವ್ರ ಟೀಕೆ ವ್ಯಕ್ತಪಡಿಸಿತು.
          ಎನ್ ಐಎ ತಪಾಸಣೆ ಹೆಸರಲ್ಲಿ ಪಾಪ್ಯುಲರ್ ಫ್ರಂಟ್ ನಡೆಸುತ್ತಿರುವ ಹರತಾಳದಲ್ಲಿ ಕೇರಳದಾದ್ಯಂತ ಹಿಂಸಾಚಾರ ನಡೆಯುತ್ತಿದ್ದು, ಹರತಾಳ ಹೆಸರಿನಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಸಾರ್ವಜನಿಕ ಆಸ್ತಿ ನಾಶ ಮಾಡಲಾಗುತ್ತಿದೆ. ಅನೇಕ ಸ್ಥಳಗಳಲ್ಲಿ, ದಾಳಿಕೋರರು ಬಂದ್ ಗೆ ಕರೆ ನೀಡುವುದರೊಂದಿಗೆ ರಂಪಾಟ ನಡೆಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries