HEALTH TIPS

ಗ್ರೀನ್‍ಫೀಲ್ಡ್ ಕ್ರೀಡಾಂಗಣದ ವಿದ್ಯುತ್ ವಿಚ್ಚೇದಿಸಿದ ಕೆ.ಎಸ್.ಇ.ಬಿ: ಭಾರತ-ದಕ್ಷಿಣ ಆಫ್ರಿಕಾ ಪಂದ್ಯಗಳಿಗೆ ದಿನಗಣನೆಯ ಹೊತ್ತಲ್ಲಿ ಆತಂಕ


           ತಿರುವನಂತಪುರ: ಕರಿಯಾವಟ್ಟಂ ಗ್ರೀನ್‍ಫೀಲ್ಡ್ ಸ್ಟೇಡಿಯಂನಲ್ಲಿ ಕೆಎಸ್‍ಇಬಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ಇದೇ ತಿಂಗಳ 13ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ವರದಿಯಾಗಿದೆ.
              ಎರಡೂವರೆ ಕೋಟಿ ರೂ ಪಾವತಿ ಬಾಕಿ ಇದೆ ಎಂದು ಕೆಎಸ್‍ಇಬಿ ಹೇಳಿಕೆ ನೀಡಿದ್ದು, ಹಲವು ಬಾರಿ ಎಚ್ಚರಿಕೆ ನೀಡಿದರೂ ಬಿಲ್ ಪಾವತಿ ಮಾಡಿಲ್ಲ ಎಂದು ಕೆಎಸ್‍ಇಬಿ ಆರೋಪಿಸಿದೆ.
             ಭಾರತ ದಕ್ಷಿಣ ಆಫ್ರಿಕಾ ಪಂದ್ಯ ಇದೇ 28 ರಂದು ಇದೇ ಸ್ಟೇಡಿಯಂನಲ್ಲಿ ನಡೆಯಲಿರುವ ಹೊತ್ತಿನಲ್ಲಿ ವಿದ್ಯುತ್ ಸಂಪರ್ಕ ವಿಚ್ಚೇದಿಸಿರುವುದು ಕಳವಳಕ್ಕೆ ಕಾರಣವಾಗಿದೆ. ಸುಧೀರ್ಘ ಅವಧಿಯ ಬಳಿಕ ಬಿಸಿಸಿಐ ಕೇರಳದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ನೀಡಿದೆ. ಕೇರಳೀಯರು ಈ ಕ್ರಿಕೆಟ್ ಪಂದ್ಯವನ್ನು ಸಂಭ್ರಮದಿಂದ ಎದುರುನೋಡುತ್ತಿರುವಾಗಲೇ ಕ್ರೀಡಾಂಗಣದ ವಿದ್ಯುತ್ ಕಡಿತದ ಸುದ್ದಿ ಹೊರಬಿದ್ದಿದೆ. ಭದ್ರತೆಯ ಅಂಗವಾಗಿ ನಗರ ಪೋಲೀಸ್ ಆಯುಕ್ತರು ಇಂದು ಕರೆದಿದ್ದ ಸಭೆ ಕರೆಂಟ್ ಇಲ್ಲದ ಸಭಾಂಗಣದಲ್ಲಿ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries