ಬದಿಯಡ್ಕ: ನಿಗೂಢವಾಗಿ ಸಾವಿಗೀಡಾಗಿರುವ ಬದಿಯಡ್ಕದ ದಂತ ವೈದ್ಯ ಡಾ. ಕೃಷದ್ಣಮೂರ್ತಿ ಸರ್ಪಂಗಳ ಅವರ ಬದಿಯಡ್ಕದ ನಿವಾಸಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಮೀಜಿ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನ ಕಲ್ಪಿಸಲಾಗಿದ್ದು, ದಂತ ವೈದ್ಯ ಕೃಷ್ಣಮೂರ್ತಿ ಅವರ ನಿಗೂಢ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ತಂದೊಡ್ಡಿದೆ. ವೈದ್ಯರ ಸಾವಿನ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದ್ದು, ನಿಗೂಢತೆ ಬಯಲಿಗೆಳೆಯಬೇಕಾಗಿದೆ. ವೈದ್ಯರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಹೊರಗೆಡಹುವುದರೊಂದಿಗೆ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ವಿಹಿಂಪ ಕಾಸರಗೋಡು ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಪ್ರಖಂಡ ಅಧ್ಯಕ್ಷ ಹರಿಪ್ರಸಾದ್ ಪುತ್ರಕಳ, ಪ್ರಮುಖರಾದ ರಾಘವೇಂದ್ರ ಕಲ್ಲೂರಾಯ, ಮಹೇಶ್ ವಳಕ್ಕುಂಜ, ಮಂಜುನಾಥ ಡಿ.ಮಾನ್ಯ, ರಮೇಶ್ ಕಳೇರಿ, ಶಿವಶಂಕರ ಭಟ್ ಗುಣಾಜೆ, ಗಣೇಶಕೃಷ್ಣ ಅಳಕ್ಕೆ ಮೊದಲಾದವರಿದ್ದರು.