HEALTH TIPS

ಸಹಕಾರ ಸಪ್ತಾಹ ಸಮಾರೋಪ: ವಿಚಾರ ಸಂಕಿರಣ


 


        ಕಾಸರಗೋಡು: 69ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭವನ್ನು ಶಾಸಕ ಎನ್.ಎ. ಉದ್ಘಾಟಿಸಿದರು. ವೃತ್ತ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಜಂಟಿ ನಿಬಂಧಕ ಕೆ. ಲಸಿತಾ, ಜಂಟಿ ನಿರ್ದೇಶಕ ಪಿ.ವಿ. ವೀಣಾ, ಗ್ರಾಹಕ ಫೆಡ್ ಆಡಳಿತ ಮಂಡಳಿ ಸದಸ್ಯ ವಿ.ಕೆ.ರಾಜನ್, ಸಹಾಯಕ ರಿಜಿಸ್ಟ್ರಾರ್‍ಗಳಾದ ಎ. ರವೀಂದ್ರ, ಕೆ. ನಾಗೇಶ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಎಂ.ಸಂಜೀವ ಶೆಟ್ಟಿ, ಇ. ಅಬೂಬಕರ್ ಹಾಜಿ ಮತ್ತು ಕೆ.ಡಬ್ಲ್ಯೂ. ಕೃಷ್ಣನ್ ಉಪಸ್ಥಿತರಿದ್ದರು.
           ಸಹಕಾರ ಸಪ್ತಾಹದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ-ಪ್ರಬಂಧ ಬರವಣಿಗೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಎನ್.ಎ.ನೆಲ್ಲಿಕುನ್ನು  ಬಹುಮಾನ ವಿತರಿಸಿದರು. ಸಹಕಾರ ವಿಚಾರ ಸಂಕಿರಣದಲ್ಲಿ ಕೇರಳ ಬ್ಯಾಂಕ್‍ನ ಉಪ ಪ್ರಧಾನ ವ್ಯವಸ್ಥಾಪಕ ರವೀಂದ್ರನ್ ವಿಷಯ ಮಂಡಿಸಿದರು.  ಸಹಾಯಕ ನೋಂದಣಾಧಿಕಾರಿ ಪಿ. ಲೋಹಿತಾಕ್ಷನ್ ಮೋಡರೇಟರ್ ಆಗಿದ್ದರು. ಕಾಸರಗೋಡು ಸಹಕಾರಿ ಪಟ್ಟಣ ಬ್ಯಾಂಕ್ ಅಧ್ಯಕ್ಷ ವಕೀಲ ಎ. ಸಿ.ಅಶೋಕ್ ಕುಮಾರಿ, ಕಾಸರಗೋಡು ಅರ್ಬನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಕೆ.ನಾಯರ್, ವರ್ಕರ್ಸ್ ಯೂನಿಯನ್ ಮುಖಂಡರಾದ ಪಿ.ಕೆ. ವಿನೋದಕುಮಾರ್,  ಬಿ. ಮೋಹನನ್,  ಬಿ.ಸುಕುಮಾರಿ, ಸಹಾಯಕ ನಿರ್ದೇಶಕ ಟಿ.ಎಂ. ಲತಾ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries