HEALTH TIPS

ಕೊಚ್ಚಿಯಲ್ಲಿ ಮಾಡಲ್ ಕಿರುಕುಳ ಘಟನೆ: ನ್ಯಾಯಾಲಯದಲ್ಲಿ ವಕೀಲರ ಮಧ್ಯೆ ವಾಗ್ದಾಳಿ; "ಇದು ಮಾರುಕಟ್ಟೆ ಅಲ್ಲ ಎಂದ ಹೈಕೋರ್ಟ್"


            ಕೊಚ್ಚಿ: ಚಲಿಸುತ್ತಿದ್ದ ಕಾರಿನಲ್ಲಿ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
         ಆರೋಪಿಗಳು ಬಾಲಕಿಗೆ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿ ಕಿರುಕುಳ ನೀಡಿದ್ದಾರೆ ಎಂದು ಪೋಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.ಎರ್ನಾಕುಳಂ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಗಳನ್ನು ಕಸ್ಟಡಿಗೆ ನೀಡಿದೆ. ಅವರನ್ನು ಎಂಟು ಕಡೆ ಕರೆತಂದು ಸಾಕ್ಷ್ಯ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ.
         ವರದಿಯ ಪ್ರಕಾರ, ವಾಹನದಲ್ಲಿ ನಡೆದಿರುವುದು ಕ್ರೂರ ಮೃಗೀಯ ಸಾಮೂಹಿಕ ಅತ್ಯಾಚಾರ. ತನಿಖಾ ತಂಡವು ಹೊಟೇಲ್‍ನ ಹೊರಭಾಗದ ಪಾರ್ಕಿಂಗ್ ಪ್ರದೇಶದಲ್ಲಿ ಮತ್ತು ಸಾರ್ವಜನಿಕವಾಗಿ ವಾಹನ ನಿಲುಗಡೆಗಳಿರುವಲ್ಲಿ ಬಾಲಕಿಗೆ ಕಿರುಕುಳ ನೀಡಿರುವುದು ಕಂಡುಬಂದಿದೆ. ರಾಜಸ್ಥಾನಿ ಮೂಲದ ಮಾಡೆಲ್ ಈ ಎಲ್ಲದಕ್ಕೂ ಸಂಚು ರೂಪಿಸಿರುವುದು ಕೂಡ ಪತ್ತೆಯಾಗಿದೆ.
         ಡಿಂಪಲ್ ಪರ ನ್ಯಾಯಾಲಯಕ್ಕೆ ಹಾಜರಾದ ಅಡ್ವ ಅಫ್ಜಲ್ ಹಾಗೂ ಅಡ್ವ ಬಿಎ ಆಲೂರ್ ನಡುವೆ ವಾಗ್ವಾದ ನಡೆದಿದೆ. ಕೋರ್ಟ್ ತೊರೆಯಲು ಅಡ್ವ. ಅಫ್ಜಲ್ ಗೆ ಅಡ್ವ. ಆಲೂರು ಆಗ್ರಹಿಸಿದರು. ಇದು ಸದ್ದು ಮಾಡುವ ಮಾರುಕಟ್ಟೆ ಅಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು. ನಂತರ, ಡಿಂಪಲ್ ಅವರು ಈ ಪ್ರಕರಣವನ್ನು ಅಡ್ವ್ ಅಫ್ಜಲ್‍ಗೆ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ವಾದ ಕೊನೆಗೊಂಡಿತು.
         ಪ್ರಕರಣದ ಆರೋಪಿಗಳಾದ ವಿವೇಕ್, ನಿತಿನ್ ಮತ್ತು ಸುಧಿ ಸಂತ್ರಸ್ತೆಯ ಸ್ನೇಹಿತ ಡಾಲಿ ಕೊಡಂಗಲ್ಲೂರು ಮೂಲದವರಾಗಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries