HEALTH TIPS

ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನ ನವೀಕರಣ: ನೂತನ ಬಿಂಬ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.29ರಿಂದ ಜ.8ರ ತನಕ

          
         ಉಪ್ಪಳ: ಹೇರೂರು ಸಮೀಪದ ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದ ನವೀಕರಣ ನೂತನ ಬಿಂಬ ಪ್ರತಿಷ್ಠಾ ಅಷ್ಟಬಂಧ  ಬ್ರಹ್ಮಕಲಶೋತ್ಸವವು ಡಿ.29ರಿಂದ ಜ.8ರ ತನಕ ವಿವಿಧ ಕಾರ್ಯಕ್ರಮಗಳೊಂದಿದೆ ನಡೆಯಲಿದೆ. ತಂತ್ರಿವರ್ಯ ಬ್ರಹ್ಮಶ್ರೀ  ಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವ ವಹಿಸುವರು.
                  ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
           ಡಿ.29ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಅಪರಾಹ್ನ 3ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಡುವ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಚಾಲನೆ ನೀಡುವರು. ಸಂಜೆ 5.30ಕ್ಕೆ ಉಗ್ರಾಣ ತುಂಬುವ ಕಾರ್ಯಕ್ರಮವನ್ನು ಆನೆಮಜಲು ವಿಷ್ಣು ಭಟ್ ಉದ್ಘಾಟಿಸುವರು. 6.30ಕ್ಕೆ ಬಿ.ವಸಂತ ಪೈ ಬದಿಯಡ್ಕ ಅವರಿಂದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ, ರಾತ್ರಿ 7ರಿಂದ ಕುಣಿತ ಭಜನೆ, 8ರಿಂದ ಕಾರ್ಯಕ್ರಮ ವೈವಿಧ್ಯ, 9ರಿಂದ ಭಕ್ತಿಗಾನ ಜರಗಲಿದೆ.



         ಡಿ.30ರಂದು ಬೆಳಗ್ಗೆ  8ರಿಂದ ವೈದಿಕ ಕಾರ್ಯಕ್ರಮ, ನವಗ್ರಹ ಶಾಂತಿ ಹೋಮ, 8.30ಕ್ಕೆ ವೇದಮೂರ್ತಿ ಗಣೇಶ ನಾವಡ ಮೀಯಪದವು ಅವರಿಂದ ಹರಿನಾಮ ಸಂಕೀರ್ತನೆ ಉದ್ಘಾಟನೆ, ಭÀಜನೆ, 11.30ಕ್ಕೆ ಹೋಮ ಪೂರ್ಣಾಹುತಿ, ಸಂಜೆ 4.30ರಿಂದ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, 5ರಿಂದ ವಿವಿಧ ವೈದಿಕ ಕಾರ್ಯಕ್ರಮ, 6.30ರಿಂದ ಕುಣಿತ ಭಜನೆ, ರಾತ್ರಿ 8ರಿಂದ ದಾಸ ಸಂಕೀರ್ತನೆ, ಡಿ.31ರಂದು ಬೆಳಗ್ಗೆ 5ರಿಂದ ವಿವಿಧ ಕಾರ್ಯಕ್ರಮ, 10ರಿಂದ ಭಜನೆ, ಸಂಜೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ  ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಜ್ಯೋತಿಷಿ ನಾರಾಯಣ ರಂಗಾ ಭಟ್ ಉಪಸ್ಥಿತಿ, ಪೆÇ್ರ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ, ವಿದ್ವಾನ್ ಭಾಸ್ಕರ ಭಟ್ ಪಂಜ ಧಾರ್ಮಿಕ ಉಪನ್ಯಾಸ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು. ರಾತ್ರಿ 8ರಿಂದ ಭಕ್ತಿಭಾವ ಲಹರಿ ನೆರವೇರಲಿದೆ.
           ಜ.1ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ, 9ರಿಂದ ಭಜನೆ, 11ರಿಂದ  ಶ್ರೀಮದ್ ಭಗವದ್ಗೀತಾ ಪಾರಾಯಣ, ಮಧ್ಯಾಹ್ನ 1ರಿಂದ ಕುಣಿತ ಭಜನೆ, ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರ ಧಾರ್ಮಿಕ ¸ಭೆÉಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ಶ್ರೀ  ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ, ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ, ವೇದಮೂರ್ತಿ ಗಣೇಶ ನಾವಡ ಮೀಯಪದವು ಉಪಸ್ಥಿತಿ, ವೇದಮೂರ್ತಿ ವಿದ್ವಾನ್ ನಾಗೇಂದ್ರ ಭಟ್ ಧಾರ್ಮಿಕ ಉಪನ್ಯಾಸ ಮತ್ತು ಹಲವು ಮಂದಿ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿರುವರು. ರಾತ್ರಿ 8ರಿಂದ ನೃತ್ಯ ನಾರಾಯಣೀಯಂ, ಜ.2ರಂದು ಬೆಳಗ್ಗೆ 5ರಿಂದ ವಿವಿಧ ವೈದಿಕ ಕಾರ್ಯಕ್ರಮ, 9ರಿಂದ ಭಜನೆ, ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6.30ರಿಂದ ನೃತ್ಯ ಸಂಭ್ರಮ, ಜ.3ರಂದು ಬೆಳಗ್ಗೆ 5ರಿಂದ ವಿವಿಧ ಕಾರ್ಯಕ್ರಮ, 9ರಿಂದ ಭಜನೆ, ಸಂಜೆ 5.30ರ ಧಾರ್ಮಿಕ ಸಭೆÉಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ, ಡಾ.ಬಿ.ಎಸ್.ರಾವ್ ಕಾಸರಗೋಡು ಅಧ್ಯಕ್ಷತೆ, ಧರ್ಮದರ್ಶಿ ಕೃಷ್ಣ ಭಟ್ ಮಂಜೇಶ್ವರ ಉಪಸ್ಥಿತಿ,  ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ಹಾಗೂ ಹಲವಾರು ಮಂದಿ

ಮುಖಂಡರು ಭಾಗವಹಿಸುವರು. ರಾತ್ರಿ 8ರಿಂದ ಹರಿಕಥಾ ಸತ್ಸಂಗ ಜರಗಲಿದೆ.

                  ಶ್ರೀ ಮಹಾವಿಷ್ಣು ದೇವರ ನೂತನ ಬಿಂಬ ಪ್ರತಿಷ್ಠೆ
          ಜ.4ರಂದು ಬೆಳಗ್ಗೆ  ವಿವಿಧÀ ವೈದಿಕ ಕಾರ್ಯಕ್ರಮ, 11.30ರಿಂದ ಮಧ್ಯಾಹ್ನ 12.45ರ ಮಧ್ಯೆ ಶ್ರೀ ಮಹಾವಿಷ್ಣು ದೇವರ ನೂತನ ಬಿಂಬ ಪ್ರತಿಷ್ಠೆ ,  ಅಷ್ಟಬಂಧ ಲೇಪನ, ಜೀವ ಕಲಶಾಭಿಷೇಕ, ಪರಿವಾರ ದೈವ ಸಾನಿಧ್ಯಗಳಲ್ಲಿ ಶ್ರೀ ದೈವಗಳ ಪ್ರತಿಷ್ಠೆ , ಕಲಶಾಭಿಷೇಕ ನೆರವೇರಲಿದೆ. 1ರಿಂದ ಭಜನೆ, ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರ ಧಾರ್ಮಿಕ ಸಭೆಯಲ್ಲಿ  ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ, ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಕಟೀಲು ಧಾರ್ಮಿಕ ಉಪನ್ಯಾಸ, ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿ, ಶಿಲ್ಪಿ ಪ್ರಸಾದ್ ಮುನಿಯಂಗಳ ಉಪಸ್ಥಿತಿ, ಡಾ.ಎಂ.ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ಮತ್ತು  ಹಲವು ಮಂದಿ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿರುವರು. ರಾತ್ರಿ 8ರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
         .5ರಂದು ಬೆಳಗ್ಗೆ 5ರಿಂದ ವಿವಿಧ ಕಾರ್ಯಕ್ರಮ, 10ರಿಂದ ಭಜನೆ, ಸಂಜೆ 5ರಿಂದ ಹರಿಕಥಾ ಸತ್ಸಂಗ, ರಾತ್ರಿ 7.30ರಿಂದ ಗೀತಾ ಸಾಹಿತ್ಯ ಸಂಭ್ರಮ, ಜ.6ರಂದು ಬೆಳಗ್ಗೆ  5ರಿಂದ ವೈದಿಕ ಕಾರ್ಯಕ್ರಮ, 11.30ರಿಂದ ಭಜನೆ, ಅಪರಾಹ್ನ 2.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರ ಮಾತೃ ಸಂಗಮದಲ್ಲಿ ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ, ಆಶಾಜ್ಯೋತಿ ರೈ ಮಂಗಳೂರು ಅಧ್ಯಕ್ಷತೆ, ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಧಾರ್ಮಿಕ ಉಪನ್ಯಾಸ ಮತ್ತು ಹಲವು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿರುವರು. ರಾತ್ರಿ 8ರಿಂದ ಯಕ್ಷಗಾನ ಬಯಲಾಟ, ಜ.7ರಂದು ಬೆಳಗ್ಗೆ 5ರಿಂದ ಗಣಪತಿ ಹವನ, ಕವಾಟೋದ್ಘಾಟನೆ, ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, 11.30ರಿಂದ ಭಜನೆ, ರಾತ್ರಿ 7ರಿಂದ ವಿವಿಧ ಕಾರ್ಯಕ್ರಮವಿದೆ.


       ಬ್ರಹ್ಮಕಲಶೋತ್ಸವ ಸಮಾರೋಪ ಸಮಾರಂಭ
   ಜ.8ರಂದು ಬೆಳಗ್ಗೆ  7.30ರಿಂದ ಭಜನೆ, 9.30ರ ಸಮಾರೋಪ ಸಮಾರಂಭದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ, ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಕಟೀಲು ಧಾರ್ಮಿಕ ಉಪನ್ಯಾಸ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ಹಾಗೂ ಕರ್ನಾಟಕ ಸಚಿವ ಎಸ್.ಅಂಗಾರ ಸಹಿತ ಹಲವಾರು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿರುವರು. ಸಂಜೆ  6ಕ್ಕೆ ಬಜೆ ತರವಾಡು ಮನೆಯಿಂದ ಶ್ರೀ ದೈವಗಳ ಭಂಡಾರ ಆಗಮನ, 6.30ರಿಂದ ಶ್ರೀ ಗುಳಿಗ ದೈವದ ನೇಮ, ರಾತ್ರಿ 7.45ರಿಂದ ಶ್ರೀ ಮಹಾವಿಷ್ಣು ದೇವರಿಗೆ ರಂಗಪೂಜೆ, 9ರಿಂದ ಸಾಂಸ್ಕøತಿಕ ಕಾರ್ಯಕ್ರಮ, 12.30ರಿಂದ ಶ್ರೀ ಧೂಮಾವತಿ ದೈವದ ನೇಮ, ಮರುದಿನ ಮುಂಜಾನೆ 3.30ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ, 5ರಿಂದ ಶ್ರೀ ಕೊರತಿ ದೈವದ ನೇಮ, 6ಗಂಟೆಗೆ ಶ್ರೀ ದೈವಗಳ ಭಂಡಾರ ಹಿಂತಿರುಗಲಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries