ಕಾಸರಗೋಡು:ಜಿಲ್ಲೆಯಲ್ಲಿ ತರಕಾರಿ ಮತ್ತು ನೇಂದ್ರಬಾಳೆಯನ್ನು ನಿಖರವಾದ ಕೃಷಿಯ(ಪ್ರಿಸಿಷನ್
ಫಾರ್ಮಿಂಗ್) ಮೂಲಕ ಅನುಷ್ಠಾನಗೊಳಿಸಲು ಶೇ.55 ರಷ್ಟು ಸಹಾಯಧನದೊಂದಿಗೆ ಕೃಷಿ ಇಲಾಖೆಯ
ಯೋಜನೆ.ರಾಜ್ಯ ಹೋರ್ಟಿಕಲ್ಚರ್ ಮಿಷನ್- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ನಿಧಿಯನ್ನು
ಬಳಸಿಕೊಂಡು ಜಿಲ್ಲೆಯಲ್ಲಿ ನಿಖರವಾದ ಕೃಷಿಯನ್ನು(ಪ್ರಿಸಿಷನ್ ಫಾರ್ಮಿಂಗ್)
ಅನುಷ್ಠಾನಗೊಳಿಸಲಾಗುತ್ತಿದೆ.
ಈ ವರ್ಷ ಜಿಲ್ಲೆಯಲ್ಲಿ 10 ಹೆಕ್ಟರ್ ನೇಂದ್ರಬಾಳೆ ಕೃಷಿ
ಹಾಗೂ 30 ಹೆಕ್ಟರ್ ತರಕಾರಿ ಕೃಷಿಗೆ ಸೌಲಭ್ಯ ನೀಡಲಾಗುತ್ತಿದೆ. ನೇಂದ್ರಬಾಳೆ ಕೃಷಿಗೆ
ಪ್ರತಿ ರೈತನಿಗೆ 4 ಹೆಕ್ಟೇರ್ವರೆಗೆ ಮತ್ತು ತರಕಾರಿ ಕೃಷಿಗೆ 2 ಹೆಕ್ಟೇರ್ವರೆಗೆ
ಸೌಲಭ್ಯ ನೀಡಲಾಗುವುದು.ನೇಂದ್ರಬಾಳೆ ಕೃಷಿಗೆ ಪ್ರತಿ ಹೆಕ್ಟೇರ್ಗೆ 96,000 ಮಂಜೂರು
ಮಾಡಲಾಗುವುದು. ಪ್ರತಿ ಹೆಕ್ಟೇರ್ಗೆ ಸಾಗುವಳಿ ವೆಚ್ಚದ 40 ಪ್ರತಿಶತ 35,000
ರೂ.,ರಸಗೊಬ್ಬರಗಳ ಬಳಕೆಗಾಗಿ ಫರ್ಟಿಗೇಷನ್ ಘಟಕ ಸ್ಥಾಪನೆಗೆ ವೆಚ್ಚದ 40 ಪ್ರತಿಶತ ಪ್ರತಿ
ಹೆಕ್ಟೇರ್ಗೆ ಗರಿಷ್ಠ 45,000 ರೂ. ಮತ್ತು ವೆಚ್ಚದ 50 ಪ್ರತಿಶತವನ್ನು ಪ್ಲಾಸ್ಟಿಕ್
ಮಲ್ಚಿಂಗ್ಗೆ ಪ್ರತಿ ಹೆಕ್ಟೇರ್ಗೆ ಗರಿಷ್ಠ 16,000 ರೂ.ವರೆಗೆ ಮಂಜೂರು ಮಾಡಲಾಗುವುದು.
ತರಕಾರಿ ಕೃಷಿಗೆ ಹೆಕ್ಟೇರ್ಗೆ 91,000 ರೂ. ನೀಡಲಾಗುವುದು. ಇದರಲ್ಲಿ ಸಾಗುವಳಿ
ವೆಚ್ಚದ ಶೇ.40 ರಂತೆ ಗರಿಷ್ಠ 20,000 ರೂ., ಫರ್ಟಿಗೇಷನ್ ಘಟಕ ಸ್ಥಾಪನೆಗೆ ಶೇ.55ರಂತೆ
ಪ್ರತಿ ಹೆಕ್ಟೇರ್ಗೆ ಗರಿಷ್ಠ 55,000 ಹಾಗೂ ಶೇ.50 ಪ್ಲಾಸ್ಟಿಕ್ ಮಲ್ಚಿಂಗ್ ಗೆ ಪ್ರತಿ
ಹೆಕ್ಟೇರ್ಗೆ ಗರಿಷ್ಠ 16,000 ರೂ. ವರೆಗೆ ಮಂಜೂರು ಮಾಡಲಾಗಿದೆ.ಮತ್ತು ನಿಖರವಾದ
ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ
ಆಯೋಜಿಸಲಾಗುವುದು.
ಕೆಲಸ ಪೂರ್ಣಗೊಂಡು ದಾಖಲೆಗಳನ್ನು ಕೃಷಿ
ಭವನಕ್ಕೆ ಸಲ್ಲಿಸಿದರೆ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ಆಸಕ್ತ
ರೈತರು ತಮ್ಮ ತಮ್ಮ ಕೃಷಿ ಭವನಗಳಿಗೆ ಜನವರಿ 31ರೊಳಗೆ ಅರ್ಜಿ ಸಲ್ಲಿಸಬೇಕು.