HEALTH TIPS

ಮಂಡಲ-ಮಕರ ಎಳಕು ಸಂದರ್ಭ ಅಯ್ಯಪ್ಪ ಸೇವಾ ಸಂಘದಿಂದ 35.5 ಲಕ್ಷ ಯಾತ್ರಾರ್ಥಿಗಳಿಗೆ ಅನ್ನದಾನ: ವರದಿ


              ಶಬರಿಮಲೆ; ಅಯ್ಯಪ್ಪ ಸೇವಾ ಸಂಘವು ಮಂಡಲ-ಮಕರ ಬೆಳಕು  ಉತ್ಸವದ ಹಿನ್ನೆಲೆಯಲ್ಲಿ  35.5 ಲಕ್ಷ ಯಾತ್ರಾರ್ಥಿಗಳಿಗೆ ಅನ್ನಸಂತರ್ಪಣೆ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
           ಅಸ್ವಸ್ಥರಾಗಿ ಸುಸ್ತಾಗಿದ್ದ 2428 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಭಕ್ತಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ.ಅಯ್ಯಪ್ಪನ್ ಚೆನ್ನೈ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋವಿಂದ ಪದ್ಮನ್ ತಿಳಿಸಿದ್ದಾರೆ. ಎರುಮೇಲಿಯಿಂದ ಕರಿಮಲ ಮಾರ್ಗವಾಗಿ ಸನ್ನಿಧಿ, ಪಂಬಾ, ನಿಲಯ್ಕಲ್ ಮತ್ತು ಕಾನನ ಪಥದಲ್ಲಿ ಭಕ್ತರ ಸೇವೆಗೆ ಅಯ್ಯಪ್ಪ ಸೇವಾ ಸಂಘ ಮಾತ್ರ ಸೇವೆಗೈದಿತ್ತು.
         ಸನ್ನಿಧಿ, ಪಂಬಾ, ನಿಲಯ್ಕಲ್, ಎರುಮೇಲಿ, ಅಝುಟ, ಕರಿಮಲ ಮತ್ತು ವಲಿಯನವಟ್ಟಂನಲ್ಲಿ ಮುಖ್ಯ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದವು. ಸನ್ನಿಧಾನಂನಲ್ಲಿ ಅತಿ ದೊಡ್ಡ ಶಿಬಿರವಿತ್ತು. ಮಕರ ಬೆಳಕಿನ ಪ್ರಮುಖ 3 ದಿನಗಳಲ್ಲಿ ತಲಾ 62,500 ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಇದು ಅಯ್ಯಪ್ಪ ಸೇವಾ ಸಂಘದ ಇತಿಹಾಸದಲ್ಲೇ ಅತಿ ದೊಡ್ಡ ಅನ್ನದಾನವಾಗಿದೆ.
         ಸನ್ನಿಧಾನಂನಲ್ಲಿ ಪ್ರತಿದಿನ ಕನಿಷ್ಠ 23 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 154 ರೋಗಿಗಳನ್ನು ಪಂಬಾದಿಂದ ಸನ್ನಿಧಾನಂವರೆಗೆ ಸ್ಟ್ರೆಚರ್‍ಗಳಲ್ಲಿ ಸಾಗಿಸಲಾಯಿತು. ಶಬರಿಮಲೆಯಲ್ಲಿ ಮೃತಪಟ್ಟ 21 ಮಂದಿಯ ಮೃತದೇಹಗಳನ್ನು ಉಚಿತವಾಗಿ ಅವರ ತವರು ಪ್ರದೇಶಗಳಿಗೆ ತಲುಪಿಸಲಾಯಿತು. ನಿಲಯ್ಕಲ್ ಟಿವಿಎಸ್ ಸಹಯೋಗದಲ್ಲಿ ಉಚಿತ ಕಾರ್ಯಾಗಾರವನ್ನು ಆಯೋಜಿಸಿತ್ತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries