ಕಾಸರಗೋಡು: ಕೇರಳ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಪಂಚಾಯತ್ಗಳಲ್ಲಿ ಮೊಬೈಲ್ ಲೋಕ್ ಅದಾಲತ್ ಆರಂಭಿಸಲಾಗಿದ್ದು, ಜನರ ಬಾಗಿಲಿಗೆ ಕಾನೂನು ನೆರವು ಒದಗಿಸುವ ಉದ್ದೇಶ ಇದರ ಲಕ್ಷ್ಯವಾಗಿದೆ. ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಕೃಷ್ಣಕುಮಾರ್ ಲೋಕ ಮೊಬೈಲ್ ಅದಾಲತ್ನ ಧ್ವಜಾರೋಹಣ ನೆರವೇರಿಸಿದರು. ಅದಾಲತ್ ಜನವರಿ 27 ರಂದು ಪ್ರಾರಂಭವಾಗಿ ಫೆಬ್ರವರಿ 19 ರಂದು ಕೊನೆಗೊಳ್ಳಲಿದೆ. 27 ರಂದು ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ಬೆಳಗ್ಗೆ 10 ಗಂಟೆಗೆ ಹಾಗೂ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಅದಾಲತ್ ನಡೆಯಿತು.28 ರಂದು ಬೆಳಿಗ್ಗೆ 10 ಗಂಟೆಗೆ ಮೀಂಜ ಗ್ರಾಮ ಪಂಚಾಯತ್ ಹಾಗೂ ಮಧ್ಯಾಹ್ನ 2 ಗಂಟೆಗೆ ವರ್ಕಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯಲಿದೆ. 30 ರಂದು ಬೆಳಿಗ್ಗೆ 10 ಗಂಟೆಗೆ ಪೈವಳಿಗೆ ಗ್ರಾಮ ಪಂಚಾಯತ್, ಮಧ್ಯಾಹ್ನ 2 ಗಂಟೆಗೆ ಪುತ್ತಿಗೆ ಗ್ರಾಮ ಪಂಚಾಯತ್, 31 ರಂದು ಬೆಳಿಗ್ಗೆ 10 ಗಂಟೆಗೆ ಕುಂಬಳೆ ಗ್ರಾಮಪಂಚಾಯತ್ ನಲ್ಲಿ, 2 ಗಂಟೆಗೆ ಮೊಗ್ರಾಲ್-ಪುತ್ತೂರು ಗ್ರಾಮ ಪಂಚಾಯಿತಲ್ಲಿ, ಸಂಜೆ 4 ರಂದು ಮಧೂರು ಗ್ರಾಮ ಪಂಚಾಯತಲ್ಲಿ. ಫೆಬ್ರವರಿ 1 ರಂದು ಬೆಳಿಗ್ಗೆ 10 ಗಂಟೆಗೆ ಎಣ್ಮಕಜೆ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ ಎರಡು ಗಂಟೆಗೆ ಬದಿಯಡ್ಕ ಗ್ರಾಮ ಪಂಚಾಯತಲ್ಲಿ, ಫೆಬ್ರವರಿ 2 ರಂದು 10 ಗಂಟೆಗೆ ಕಾರಡ್ಕ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 2 ಗಂಟೆಗೆ ಮುಲಿಯಾರ್ ಗ್ರಾಮ ಪಂಚಾಯತಲ್ಲಿ, ಫೆಬ್ರವರಿ 3ರಂದು ಬೆಳಗ್ಗೆ 10ಕ್ಕೆ ಕುಂಬ್ಡಾಜೆ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 2 ಗಂಟೆಗೆ ಬೆಳ್ಳೂರು ಗ್ರಾಮ ಪಂಚಾಯತಲ್ಲಿ, 4ರಂದು ಬೆಳಗ್ಗೆ 10ಕ್ಕೆ ಕುತ್ತಿಕೋಲ್ ಗ್ರಾಮ ಪಂಚಾಯತಲ್ಲಿ ಮಧ್ಯಾಹ್ನ 2 ಗಂಟೆಗೆ ಬೇಡಕಂ ಗ್ರಾಮ ಪಂಚಾಯತ್ ನಲ್ಲಿ, 6 ರಂದು ಬೆಳಗ್ಗೆ 10 ಗಂಟೆಗೆ ಚೆಂಗಳ ಗ್ರಾಮ ಪಂಚಾಯತ್, ಮಧ್ಯಾಹ್ನ 2 ಗಂಟೆಗೆ ಚೆಮ್ಮನಾಡು ಗ್ರಾಮ ಪಂಚಾಯತಲ್ಲಿ,
7ರಂದು ಬೆಳಗ್ಗೆ 10ಕ್ಕೆ ಉದುಮ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 12ಕ್ಕೆ ಪಳ್ಳಿಕ್ಕರ ಗ್ರಾಮ ಪಂಚಾಯತಲ್ಲಿ, 8 ರಂದು 10 ಗಂಟೆಗೆ ಪುಲ್ಲೂರು ಪೆರಿಯ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 2:00 ಗಂಟೆಗೆ ಅಜನೂರು ಗ್ರಾಮ ಪಂಚಾಯತ್ ನಲ್ಲಿ, 9 ರಂದು 10 ಗಂಟೆಗೆ ಕಿನಾನೂರು ಕರಿಂತಲಂ ಗ್ರಾಮ ಪಂಚಾಯತ್, ಮಧ್ಯಾಹ್ನ 2:00 ಗಂಟೆಗೆ ಮಡಿಕೈ ಗ್ರಾಮ ಪಂಚಾಯತಲ್ಲಿ,10 ರಂದು ಬೆಳಿಗ್ಗೆ 10 ಗಂಟೆಗೆ ಪೂರ್ವ ಎಳೇರಿ ಗ್ರಾಮ ಪಂಚಾಯಿತಿ, 13 ರಂದು ಬೆಳಿಗ್ಗೆ 10 ಗಂಟೆಗೆ ಪಿಲಿಕೋಟ್ ಗ್ರಾಮ ಪಂಚಾಯತ್,ಮಧ್ಯಾಹ್ನ 2 ಗಂಟೆಗೆ ಕಯ್ಯೂರ್ ಚಿಮೇನಿ ಗ್ರಾಮ ಪಂಚಾಯಿತಿ, 14 ರಂದು ಬೆಳಿಗ್ಗೆ 10 ಗಂಟೆಗೆ ಚೆರುವತ್ತೂರು ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 2 ಗಂಟೆಗೆ ಪಡಣ್ಣ ಗ್ರಾಮ ಪಂಚಾಯತ್.15ರಂದು ಬೆಳಗ್ಗೆ 10ಕ್ಕೆ ತ್ರಿಕರಿಪುರ ಗ್ರಾಮ ಪಂಚಾಯಿತಿ, ಮಧ್ಯಾಹ್ನ 2ಕ್ಕೆ ವಲಿಯಪರಂಬ ಗ್ರಾಮ ಪಂಚಾಯತಲ್ಲಿ,16ರಂದು ಬೆಳಗ್ಗೆ 10ಕ್ಕೆ ಪಣತ್ತಡಿ ಗ್ರಾಮ ಪಂಚಾಯತಲ್ಲಿ, ಮಧ್ಯಾಹ್ನ 2ಕ್ಕೆ ಕಲ್ಲಾರ್ ಗ್ರಾಮ ಪಂಚಾಯತಲ್ಲಿ, 17ರಂದು ಬೆಳಗ್ಗೆ 10ಕ್ಕೆ ವೆಸ್ಟ್ ಎಳೇರಿ ಗ್ರಾಮ ಪಂಚಾಯತಲ್ಲಿ,ಮಧ್ಯಾಹ್ನ 2ಕ್ಕೆ ಬಳ್ಳಾಲ್,18ರಂದು ಬೆಳಗ್ಗೆ 10 ಗಂಟೆಗೆ ಕೋಟೋಂ-ಬೇಲೂರು ಗ್ರಾಮ ಪಂಚಾಯಿತಿಗಳಲ್ಲಿ ಅದಾಲತ್ ನಡೆಯಲಿದೆ.
ಧ್ವಜಾರೋಹಣ ಸಮಾರಂಭದಲ್ಲಿ ಡಿ.ಎಲ್.ಸಿ.ಎ ಕಾರ್ಯದರ್ಶಿ ಬಿ.ಕರುಣಾಕರನ್, ನಿವೃತ್ತ ಜಿಲ್ಲಾ ನ್ಯಾಯಾಧೀಶ ಶಂಕರಣ್ಣಯ್ಯರ್, ಕಾನೂನು ನೆರವು ರಕ್ಷಣಾ ಮಂಡಳಿ ಸದಸ್ಯರು ಮತ್ತು ಪಿ.ಎಲ್.ವಿ ಭಾಗವಹಿಸಿದ್ದರು.
ಮೊಬೈಲ್ ಲೋಕ ಅದಾಲತ್ ಆರಂಭ
0
January 27, 2023