HEALTH TIPS

ಇತಿಹಾಸಪ್ರಸಿದ್ಧ ನೆಲ್ಲಿಕುಂಜೆ ತಂóಙಳ್ ಉಪ್ಪಾಪ ಉರುಸ್‍ಗೆ ಇಂದು ಧ್ವಜಾರೋಹಣ

 


           ಕಾಸರಗೋಡು: ಇತಿಹಾಸ ಪ್ರಸಿದ್ಧ ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಜುಮುಅಅತ್ ಮಸೀದಿಯಲ್ಲಿ ತಙಳ್ ಉಪ್ಪಪ ಉರುಸ್ ಜ. 25ರಿಂದ ಫೆ. 4ರ ವರೆಗೆ ಜರುಗಲಿರುವುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
          ಕಾಸರಗೋಡು, ಕಣ್ಣೂರು ಹಾಗೂ  ದ.ಕ ಜಿಲ್ಲೆಯಿಂದಲೂ ನೂರರು ಸಂಖ್ಯೆಯಲ್ಲಿ ಜಾತಿಮತ ಭೇದವಿಲ್ಲದೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಎರಡು ವರ್ಷಗಳಿಗೆ ಒಂದುಬಾರಿ ಉರುಸ್ ಸಮಾರಂಭ ನಡೆಯುತ್ತಿದ್ದು, ಕೋಮುಸೌಹಾರ್ದತೆ ಹಾಗೂ ಭಾವೈಕ್ಯದ ಸಂಕೇತವಾಗಿಯೂ ಉರುಸ್ ಖ್ಯಾತಿ ಗಳಿಸಿದೆ. 25ರಂದು ಬೆಳಗ್ಗೆ 9ಕ್ಕೆ ಉರುಸ್ ಸಮಿತಿ ಅಧ್ಯಕ್ಷ ಟಿ.ಎ ಮಹಮ್ಮದ್ ಹಾಜಿ ಧ್ವಜಾರೋಹಣ ನಡೆಸುವರು. ರಾತ್ರಿ 9ಕ್ಕೆ ಆರಂಭಗೊಳ್ಳುವ ಉರುಸ್ ಸಮಾರಂಭವನ್ನು ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಅತ್ ಖಾಸಿ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಪ್ರತಿ ದಿನ ರಾತ್ರಿ 9ಕ್ಕೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಪ್ರಮುಖ ಧಾರ್ಮಿಕ ವಿದ್ವಾಂಸರು ಪ್ರವಚನ ನೀಡಲಿದ್ದಾರೆ. ಫೆ. 4ರಮದು ಉರುಸ್ ಸಂಪನ್ನಗೊಳ್ಳಳಿದ್ದು, 5ರಂದು ಸಾವಿರಾರು ಮಂದಿಗೆ ತುಪ್ಪದ ಅನ್ನ ವಿತರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಹಾಜಿ ಟಿ.ಎ, ಅಶ್ರಫ್ ಸಿ.ಎಂ, ಹನೀಫ್ ನೆಲ್ಲಿಕುನ್ನು, ಎನ್.ಎ ಹನೀಫ್, ಅಬ್ದು ತೈವಳಪ್ಪು, ಎನ್.ಎಂ ಸಉಬೈರ್, ಎನ್.ಎ ಇಕ್ಬಾಲ್ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries