ನವದೆಹಲಿ: ಕೇರಳದಲ್ಲಿ ಕೊರೋನಾ ವಿರುದ್ದದ ರಕ್ಷಣಾ ಕಾರ್ಯಚಟುವಟಿಕೆಗಳನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಎರಡನೇ ಅಲೆ ಆರಂಭವಾಗಿ ತಿಂಗಳುಗಳ ನಂತರವೂ, ಭಾರತದಲ್ಲಿ ದೈನಂದಿನ ಶೇಕಡಾ 65 ರಷ್ಟು ಕೊರೊನಾ ಪ್ರಕರಣಗಳು ಕೇರಳದಿಂದ ವರದಿಯಾಗುತ್ತಿವೆ. ಕೊರೋನಾದ ವಿರುದ್ದದ ಕಾರ್ಯಚಟುವಟಿಕೆಗಳ ಗಂಭೀರ ಲೋಪಗಳನ್ನು ತಳ್ಳಿಹಾಕಲಾಗುವುದಿಲ್ಲ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕೇರಳ ಮಾದರಿಯ ಆರೋಗ್ಯ ರಕ್ಷಣೆ ಸಂಪೂರ್ಣ ವಿಫಲ. ಕೊರೋನಾ ಪೆÇ್ರೀಟೋಕಾಲ್ಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವರು.
The Kerala Model of pandemic management is broken. Several months later, 65% of India’s Covid caseload continues to come from Kerala alone.
There can be no explanation for this except gross mismanagement, skewed priorities and complete disregard for enforcing critical protocols. https://t.co/XWGQi9hHAV
— Amit Malviya (@amitmalviya) August 25, 2021
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ವರದಿಯಾಗಿರುವ ಕೊರೊನಾ ಪ್ರಕರಣಗಳ ವರದಿಗಳಿಗೆ ಪ್ರತಿಕ್ರಿಯಿಸಲು ಅಮಿತ್ ಮಾಳವೀಯ ಟ್ವಿಟ್ಟರ್ ಚರ್ಚೆ ಕರೆದಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 37,593 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 24,296 ಕೇರಳದವುಗಳಾಗಿವೆ. ಪ್ರಸ್ತುತ, ರಾಜ್ಯದಲ್ಲಿ ದೈನಂದಿನ ಪರೀಕ್ಷಾ ಧನಾತ್ಮಕ ದರವು ಶೇಕಡಾ 18 ರಷ್ಟಿದೆ.