ಮಂಜೇಶ್ವರ: ಸಾಮಾನ್ಯ ವ್ಯಕ್ತಿತ್ವ ಅಸಾಮಾನ್ಯ ಸಾಧನೆಗೆ ಅಂಗೀಕಾರ ಬಿಜೆಪಿ ಯಲ್ಲಿ ಮಾತ್ರ ಸಾಧ್ಯ, ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿÀ ಮುರ್ಮು ರವರ ಸಾಧನೆ ಅಸಮಾನ್ಯವಾದದ್ದು. ಅವರ ಅಪಾರ ಪಾಂಡಿತ್ಯ ರಾಜಕೀಯ, ಸಾಮಾಜಿಕ ಅನುಭವಗಳು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ವಿಜಯಿಯಾಗುವಂತೆ ಮಾಡಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಅಭಿಪ್ರಾಯ ಪಟ್ಟರು.
ಮಂಡಲ ಬಿಜೆಪಿ ಸಂಘಟಿಸಿದ ವಿಜಯೋತ್ಸವ ಸಭೆ ಮಿಯಪದವಿ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮಿಯಪದವು ಪೇಟೆಯಲ್ಲಿ ಬಿಜೆಪಿ ವಿಜೆಯೋತ್ಸವ ಹಮ್ಮಿಕೊಂಡಿತತ್ತು.
ಮುಖಂಡರಾದ ಹರಿಶ್ಚಂದ್ರ ಎಂ, ಎ ಕೆ ಕಯ್ಯಾರು, ಸದಾಶಿವ ಚೇರಾಲು, ಶಂಕರ ನಾರಾಯಣ ಮುಂದಿಲ, ನಾರಾಯಣ ನಾಯ್ಕ್, ಆಶಾಲತ ಪೇಲಪ್ಪಾಡಿ, ತುಳಸಿ ವರ್ಕಾಡಿ, ಜಯಲಕ್ಷ್ಮಿ ಭಟ್, ಪ್ರವೀಣ್ ಚಂದ್ರ ಬಲ್ಲಾಳ್, ಕೆ.ವಿ. ಭಟ್, ಚಂದ್ರ ಶೇಖರ್ ವರ್ಕಾಡಿ, ರವಿ ವರ್ಕಾಡಿ, ರಾಜ್ ಕುಮಾರ್, ಶೇಖರ್ ಕೋಡಿ, ಕುಸುಮ ಶೆಟ್ಟಿ ಮೊದಲಾದವರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸುಬ್ರಮಣ್ಯ ಭಟ್ ಸ್ವಾಗತಿಸಿದರು, ಚಂದ್ರಹಾಸ ಕಡಂಬಾರ್ ವಂದಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.
ಜನ ಸಾಮಾನ್ಯರ ಉನ್ನತಿ ಬಿಜೆಪಿ ಯಿಂದ ಮಾತ್ರ ಸಾಧ್ಯ-ಆದರ್ಶ್ ಬಿಎಂ
0
July 25, 2022