ಮುಳ್ಳೇರಿಯ: ಬಹುಮುಖ ಪ್ರತಿಭಾವಂತ ಯಕ್ಷಗಾನ ಗುರು ವಿಶ್ವವಿನೋದ ಬನಾರಿ ಅವರ 75ನೇಯ ವರ್ಷದ ಸಂಭ್ರಮವನ್ನು ಅರ್ಥವತ್ತಾಗಿ ಆಚರಿಸುವ ಕುರಿತು ಪೂರ್ವಸಿದ್ಧತಾ ಸಭೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಜರಗಿತು. ಶಿಷ್ಯರೂ ಹಿತೈಷಿಗಳೂ ಅಭಿಮಾನಿಗಳೂ ಭಾಗವಹಿಸಿದ ಈ ಸಭೆಯಲ್ಲಿ ಅಭಿನಂದನಾ ಸಮಾರಂಭವನ್ನು ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅಭಿನಂದನ ಕೃತಿ ಪ್ರಕಟಣೆಯ ಸಹಿತ ಆಚರಿಸುವುದೆಂದು ನಿರ್ಧರಿಸಲಾಯಿತು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಡಾ. ರಮಾನಂದ ಬನಾರಿಯವರ ಹಿರಿತನದಲ್ಲಿ ನಡೆದ ಈ ಪೂರ್ವಭಾವಿ ಸಭೆಯಲ್ಲಿ ಊಜಂಪಾಡಿ ನಾರಾಯಣ ನಾಯ್ಕ್ ಅವರನ್ನು ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾರಾಯಣ ದೇಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ಮಾಸ್ತರ್ ದೇಲಂಪಾಡಿ ಖಜಾಂಜಿಯಾಗಿ ಕೆ. ಶಿವರಾಮ ಕಲ್ಲೂರಾಯ, ಉಪಾಧ್ಯಕ್ಷರಾಗಿ ಚಂದ್ರಶೇಖರ ಏತಡ್ಕ, ಅಪ್ಪಯ್ಯ ಮಣಿಯಾಣಿ, ಎ.ಜಿ.ಮುದಿಯಾರು ಹಾಗೂ ಎಂ.ರಮಾನಂದ ರೈ ದೇಲಂಪಾಡಿ, ಯು.ಬಿ.ಶ್ರೀನಿಲಯ, ಕುಮಾರ ಸುಬ್ರಹ್ಮಣ್ಯ ವಳಕುಂಜ ಅವರನ್ನು ಕಾರ್ಯದರ್ಶಿಗಳಾಗಿ ಮತ್ತು ಸಹಭಾಗಿಗಳಾದವರನ್ನು ಸದಸ್ಯರಾಗಿ ಆರಿಸಲಾಯಿತು.
ವಿವಿಧ ಉಪಸಮಿತಿಗಳನ್ನು ರಚಿಸಿ ಕಾರ್ಯಕ್ರಮದ ಸ್ಥೂಲ ಮುನ್ನೋಟವನ್ನು ನೀಡಲಾಯಿತು. ಸರ್ವರ ಸಲಹೆ ಸೂಚನೆಗಳಂತೆ ಅಗತ್ಯವಿದ್ದಲ್ಲಿ ಸಮಿತಿಯನ್ನು ವಿಸ್ತರಿಸಿಕೊಳ್ಳುವುದೆಂದೂ ತೀರ್ಮಾನಿಸಲಾಯಿತು. ರಾಮಣ್ಣ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಂ. ರಮಾನಂದ ರೈ ವಂದಿಸಿದರು.
ವಿಶ್ವವಿನೋದ ಬನಾರಿ 75: ಅಭಿನಂದನ ಸಮಿತಿಯ ರೂಪೀಕರಣ
0
September 21, 2022