ಬದಿಯಡ್ಕ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಆಯಿಲ್ ಕೋಪೆರ್Çೀರೇಶನ್ ಲಿಮಿಟೆಡ್ ಕೇರಳ, ಇವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 75 ವಿದ್ಯಾರ್ಥಿನಿಯರಿಗೆ ಮೇಧಾ ಛಾತ್ರವೃತ್ತಿ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನ ನೀಡಿ ಯುವ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸಿದೆ. ಕೇರಳ ವಿದ್ಯಾಭ್ಯಾಸ ಇಲಾಖೆಯ ಅನುಮೋದನೆಯೊಂದಿಗೆ ಇಂಡಿಯನ್ ಆಯಿಲ್ ಸಂಸ್ಥೆ 75 ವಿದ್ಯಾರ್ಥಿನಿಯರನ್ನು ಗುರುತಿಸಿದ್ದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಿಂಚನಾ ಒಳಗೊಂಡಂತೆ ಕಾಸರಗೋಡು ಜಿಲ್ಲೆಯ ಆರು ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಈ ಪುರಸ್ಕಾರ ಲಭಿಸಿದೆ.
ಕು. ಸಿಂಚನಾ ಪ್ರಸ್ತುತ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ವನ್ ತರಗತಿಯಲ್ಲಿ ಕಲಿಯುತ್ತಿದ್ದು ಪೋಲೀಸ್ ಅಧಿಕಾರಿ ದಿ. ಕುಂಟಾಲು ಮೂಲೆ ಜನಾರ್ಧನ ನಾಯ್ಕ ಹಾಗೂ ಜಯಲಕ್ಷ್ಮೀ ದಂಪತಿಯರ ಪುತ್ರಿ. ಈಕೆಯ ಪ್ರತಿಭೆಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಆಡಳಿತ ಮಂಡಳಿ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.
ಸಿಂಚನಾಳಿಗೆ ಮೇಧಾ ಛಾತ್ರವೃತ್ತಿ ಪುರಸ್ಕಾರ
0
September 21, 2022