ಪೆರ್ಲ : ಹುಚ್ಚುನಾಯಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಾಕುನಾಯಿಗಳಿಗೆ ಹುಚ್ಚುಬಾಧೆ ತಡೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ ಪೆರ್ಲ ಸರ್ಕಾರಿ ಮೃಗಾಸ್ಪತ್ರೆಯಲ್ಲಿ ಆರಂಭಗೊಂಡಿತು. ಸೆ. 18ರ ವರೆಗೆ ಚುಚ್ಚುಮದ್ದು ವಿತರಣೆ ನಡೆಯಲಿರುವುದು. ಕೇರಳ ಪಶುಸಂಗೋಪನಾ ಇಲಾಖೆ ಮತ್ತು ಎಣ್ಮಕಜೆ ಗ್ರಾಮ ಪಂಚಾಯಿತಿ ವತಿಯಿಂದ ಶಿಬಿರ ನಡೆಯುತ್ತಿದೆ.
ಪ್ರತಿ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಚುಚ್ಚುಮದ್ದು ವಿತರಣೆ ನಡೆಯುವುದು. ಸಾಕುನಾಯಿಗಳ ವಾರಸುದಾರರು ಮೂರು ತಿಂಗಳಿಂದ ಮೇಲ್ಪಟ್ಟ ನಾಯಿಗಳನ್ನು ಮೃಗಾಸ್ಪತ್ರೆಗೆ ತಲುಪಿಸಿ ಚುಚ್ಚುಮದ್ದು ನೀಡಬೇಕು. ನಂತರ ವ್ಯಾಕ್ಸಿನೇಶನ್ ಸರ್ಟಿಫಿಕೇಟನ್ನು ಪಂಚಾಯಿತಿಗೆ ಹಾಜರುಪಡಿಸಿ ನಾಯಿ ಸಾಕಣಿಕೆಗೆ ಅಗತ್ಯ ಪರವಾನಗಿ ಪಡೆದುಕೊಳ್ಳುವಂತೆ ಮೃಗಾಸ್ಪತ್ರೆ ವೈದ್ಯಾಧಿಕಾರಿ ಡಾ. ಬ್ರಿಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಚ್ಚುನಾಯಿ ರೋಗ: ಪೆರ್ಲ ಮೃಗಾಸ್ಪತ್ರೆಯಲ್ಲಿ ಚುಚ್ಚುಮದ್ದು ವಿತರಣೆ ಆರಂಭ
0
September 16, 2022