ಕುಂಬಳೆ : ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಪಕ್ಷ ಹೆಮ್ಮಿಕೊಂಡ ಎರಡು ವಾರಗಳ ಸೇವಾ ಚಟುವಟಿಕೆಯ ಅಂಗವಾಗಿ ಪ್ರಥಮ ಕಾರ್ಯಕ್ರಮವಾದ ನರೇಂದ್ರ ಮೋದಿಜಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಅಂಚೆ ಪತ್ರ ಕಳುಹಿಸುವ ಕಾರ್ಯಕ್ರಮವನ್ನು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಇವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕೇರಳ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ ಕುಮಾರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಉಪಾಧ್ಯಕ್ಷರಾದ ಕೆ ರಮೇಶ್ ಭಟ್, ಪ್ರೇಮಲತಾ ಎಸ್, ಕಾರ್ಯದರ್ಶಿ ಕೆ. ಸುಧಾಕರ್ ಕಾಮತ್, ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ, ನೇತಾರರಾದ ಸುಜಿತ್ ರೈ, ಪ್ರದೀಪ್ ಆರಿಕ್ಕಾಡಿ, ಮಹೇಶ್ ಪುಣಿಯೂರ್, ಜಿತೇಶ್ ನಾೈಕಾಪು, ಶಶಿ ಕುಂಬಳೆ, ವೇಣುಗೋಪಾಲ್ ಕಡಪ್ಪುರ, ಜನಪ್ರತಿನಿಧಿಗಳಾದ ಪ್ರೇಮ ಶೆಟ್ಟಿ, ವಿದ್ಯಾ ಎನ್ ಪೈ, ಜನಾರ್ಧನ್, , ಪ್ರೇಮಾವತಿ, ಪುಷ್ಪಲತಾ ಕಾಜೂರ್ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತಿ ಸದಸ್ಯ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಶೋಭಾ ಎಸ್ ವಂದಿಸಿದರು.
ಬಿಜೆಪಿಯಿಂದ ಮೋದಿ ಜನ್ಮ ದಿನಾಚರಣೆ: ಅಂಚೆಪತ್ರ ರವಾನೆ
0
September 17, 2022