ಉಪ್ಪಳ: ಶ್ರೀನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಶ್ರೀ ಮಠದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಇತ್ತೀಚೆಗೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ ಶ್ರೀಕೃಷ್ಣ ಪರಂಧಾಮ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಮಪ್ರಸಾದ ಮಯ್ಯ ಕೂಡ್ಲು ಭಾಗವಹಿಸಿದ್ದು ಚೆಂಡೆ ಮದ್ದಳೆಯಲ್ಲಿ ರಾಮ ಹೊಳ್ಳ ಸುರತ್ಕಲ್, ರಿತೇಶ್ ಅಡ್ಕ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಗಣೇಶ ನಾವಡ ಮೀಯಪದವು, ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ, ಗುರುರಾಜ ಹೊಳ್ಳ ಬಾಯಾರು, ಯೋಗೀಶ ರಾವ್ ಚಿಗುರುಪಾದೆ, ಅವಿನಾಶ ಹೊಳ್ಳ ವರ್ಕಾಡಿ ಭಾಗವಹಿಸಿದ್ದರು.
ಕೊಂಡೆವೂರಲ್ಲಿ ಗುರುನರಸಿಂಹ ತಂಡದ ತಾಳಮದ್ದಳೆ
0
September 16, 2022