ಬದಿಯಡ್ಕ: ರಾಜ್ಯ ಸೇವಾ ಪಿಂಚಣಿದಾರರ ಕಾಸರಗೋಡು ಬ್ಲಾಕ್ ಸಮ್ಮೇಳನ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಭಾನುವಾರ ಜರಗಿತು.
ಧ್ವಜಾರೋಹಣ ಬಳಿಕ ಪ್ರತಿನಿಧಿ ಸಮ್ಮೇಳನ, ವನಿತಾ ಸಮ್ಮೇಳನ, ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟಕ ಸಮಿತಿಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ನೇತಾರ ಪಿ.ಜಿ. ಚಂದ್ರಹಾಸ ರೈ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ, ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸಿ ಮಾತನಾಡಿ, ಕೇರಳವನ್ನು ಆಳ್ವಿಕೆ ನಡೆಸುತ್ತಿರುವ ಎಲ್.ಡಿ.ಎಫ್ ಸರ್ಕಾರ ಸರ್ಕಾರಿ ನೌಕರರನ್ನು ವಂಚಿಸಿದೆ. ಕ್ಲಪ್ತ ವೇಳೆ ವೇತನ, ಭತ್ತೆಗಳನ್ನು ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು. ಕೆ.ಎಸ್.ಎಸ್.ಪಿ.ಎ ಜಿಲ್ಲಾಧ್ಯಕ್ಷ ಪಿಸಿ ಸುರೇಂದ್ರ ನಾಯರ್ ಮುಖ್ಯ ಭಾಷಣ ಮಾಡಿದರು.
ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಎಂ, ಸದಸ್ಯ ಶಾಮ್ ಪ್ರಸಾದ್ ಮಾನ್ಯ, ಅನಸೂಯಾ ಮಾನ್ಯ, ಪ್ರೇಮ್ ರಾಜನ್, ಬಲರಾಮನ್ ನಾಯರ್, ಕುಂಞಕಣ್ಣನ್ ಕರಿಚೇರಿ, ಶಶಿಧರನ್ ಮಾಸ್ತರ್, ಪುರುμÉೂೀತ್ತಮನ್ ಕಾರಡ್ಕ, ಬಾಲಕೃಷ್ಣ, ಮಾಧವನ್, ಕೆ ಕೃಷ್ಣನ್, ಕೆ.ಸಿ. ಸುಶೀಲ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕೆ.ಎಸ್.ಎಸ್.ಪಿ.ಎ ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ಸೀತರಾಮ ಮಲ್ಲ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಭಟ್ಯ ಎ.ಸ್. ವಂದಿಸಿದರು.
ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ, ಮಂಡಲ ಅಧ್ಯಕ್ಷ ನಾರಾಯಣ ಎಂ ವಹಿಸಿದ್ದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾರಿಜಾಕ್ಷನ್ ಉದ್ಘಾಟಿಸಿದರು. ಮಹಮ್ಮದ್ ಆಲಿ ಪೆರ್ಲ, ಗೋಪಾಲನ್, ಕೃಷ್ಣದಾಸ್ ಶುಭ ಹಾರೈಸಿದರು. ಬದಿಯಡ್ಕ ಮಂಡಲ ಕಾರ್ಯದರ್ಶಿ ಇಬ್ರಾಹಿಂ ಕನ್ನೆಪಾಡಿ ಸ್ವಾಗತಿಸಿ, ಕಾಸರಗೋಡು ಬ್ಲಾಕ್ ಖಜಾಂಜಿ ಕೆ. ಶ್ರೀಧರ ವಂದಿಸಿದರು. ಮುಕುಂದ ಮಾಸ್ತರ್, ಸೂಫಿ ಬದಿಯಡ್ಕ, ಚಂದ್ರಹಾಸ ಮಾಸ್ತರ್, ಕಾಸರಗೋಡು ಬ್ಲಾಕ್ ಅಧ್ಯಕ್ಷ ಕೆ ಚಂದ್ರಶೇಖರ ನಾಯರ್, ವಿವಿಧ ಮಂಡಲ ಅಧ್ಯಕ್ಷರುಗಳು ಉಪಸ್ಥಿತರಿದ್ದರು.