ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆಯಲಿರುವ ವಾರ್ಷಿಕ ಷಷ್ಠಿ-ಕಿರುಷಷ್ಠಿ ಉತ್ಸವದ ಸಿದ್ಧತಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಸೇವಾಸಮಿತಿ ಕಾರ್ಯಾಧ್ಯಕ್ಷ ಏವಿಂಜೆ ಶಾಂಭಟ್, ಕಾರ್ಯದರ್ಶಿ ಪಡಿಯಡ್ಪು ಮಹೇಶ್ ಭಟ್ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಚರ್ಚಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಚಂದ್ರಹಾಸ ರೈ ವಂದಿಸಿದರು.
ಕುಕ್ಕಂಕೂಡ್ಲು ದೇವಸ್ಥಾನದಲ್ಲಿ ಷಷ್ಠಿ, ಕಿರುಷಷ್ಠಿ ಸಿದ್ಧತಾ ಸಭೆ
0
November 23, 2022
Tags