ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಜೂನಿಯರ್ ರೆಡ್ ಕ್ರಾಸಿನ ಒಂದು ದಿನದ ವಿಚಾರ ಸಂಕಿರಣ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜಿನ ಸಂಚಾಲಕ ಜಯದೇವ ಖಂಡಿಗೆ ಧ್ವಜಾರೋಹಣ ನೆರವೇರಿಸಿದರು. ಮೀಂಜ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಭಾಕರ್ ರೈ ಉದ್ಘಾಟಿಸಿದರು. ಜೂನಿಯರ್ ರೆಡ್ ಕ್ರಾಸಿನ ಜಿಲ್ಲಾ ಕನ್ವೀನರ್ ಶಮೀರ್ ತೆಕ್ಕಿಲ್ ರೆಡ್ ಕ್ರಾಸಿನ ಕುರಿತಾಗಿ ಕಿರು ಮಾಹಿತಿಯನ್ನು ನೀಡಿದರು. ಹೆಲ್ತ್ ಇನ್ಸ್ಪೆಕ್ಟರ್ ಶುಭಾರಾಣಿ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ದನ, ಮಾತೃಸಂಘದ ಅಧ್ಯಕ್ಷೆ ಶೋಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್ ಸ್ವಾಗತಿಸಿ, ಗಂಗಾರತ್ನ ಟೀಚರ್ ವಂದಿಸಿದರು. ಜೂನಿಯರ್ ರೆಡ್ ಕ್ರಾಸಿನ ಕೌನ್ಸಿಲರ್ ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್, ಪ್ರಥಮ ಚಿಕಿತ್ಸೆ, ಟ್ರಾಫಿಕ್ ನಿಯಮಗಳ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ನಡೆದವು.
ಜೂನಿಯರ್ ರೆಡ್ ಕ್ರಾಸ್ ನಿಂದ ವಿಚಾರ ಸಂಕಿರಣ
0
January 24, 2023
Tags